Advertisement

ನವ ವಿವಾಹಿತೆ ಕೆರೆಗೆ ಬಿದ್ದು ಸಾವು :‌ ಸಾವಿನ ಬಗ್ಗೆ ಸಂಶಯ..!

01:07 PM Oct 19, 2019 | Team Udayavani |

ಬೆಳ್ಳಾರೆ, ಅ. 18 : ಚೊಕ್ಕಾಡಿ ಸಮೀಪದ ಕುಕ್ಕುಜಡ್ಕದಲ್ಲಿ ನವವಿವಾಹಿತೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಡಿ.17 ರಂದು ನಡೆದಿದೆ.

Advertisement

ಕುಕ್ಕುಜಡ್ಕ ತಂಟೆಪ್ಪಾಡಿ ನಿವಾಸಿ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಹರೀಶ್ ಅವರ ಪತ್ನಿ ಶ್ರುತಿ ಮೃತ ನವ ವಿವಾಹಿತೆ.

ಅಜ್ಜಾವರ ಗ್ರಾಮದ ಮುಳ್ಯ ಲಕ್ಷ್ಮಣ ಗೌಡ ಅವರ ಪುತ್ರಿ ಶ್ರುತಿ ಅವರ ವಿವಾಹವು ಹರೀಶ್‌ ಅವರ ಜತೆ 2018 ಡಿ.27‌ ರಂದು ನಡೆದಿತ್ತು. ಅನ್ಯೋನ್ಯವಾಗಿದ್ದ ಪತಿ ಪತ್ನಿಯ ನಡುವೆ ಕೆಲ ಸಮಯಯದ ಹಿಂದೆ ಜಗಳವಾಗಿತ್ತೆಂದೂ ಈ ವಿಷಯ ಶ್ರುತಿ ಆಕೆಯ ಮನೆಯವರಿಗೆ ತಿಳಿಸಿ ಮನೆಯವರು ಕುಕ್ಕುಜಡ್ಕ ಹೋಗಿ ಅವರಿಬ್ಬರನ್ನು ಸಮಧಾನ ಪಡಿಸಿ ಬಂದಿದ್ದರೆಂದು ಶ್ರುತಿಯ ಸಂಬಂಧಿಕರು ಹೇಳುತ್ತಾರೆ.

ಅ.17 ರಂದು 7ಗಂಟೆ ಸುಮಾರಿಗೆ ಶ್ರುತಿ ಕೆರೆಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಆಕೆಯ ಪತಿ ಫೋನ್ ಮಾಡಿದ್ದ. ಬಳಿಕ ನಾವು ಹೋಗಿ ನೋಡಿದಾಗ ಆಕೆಯ ಶವ ಕೆರೆಯಲ್ಲಿತ್ತು. ಆಕೆ ಯಾಕೆ ಹೀಗೆ ಮಾಡಿದ್ದಾಳೆ ಎಂದು ನಮಗೆ ಗೊತ್ತಿಲ್ಲ. ಅದರೆ ಗಂಡ ತನ್ನೊಡನೆ ಸರಿಯಾಗಿ ಮಾತನಾಡುತ್ತಿಲ್ಲ, ನಾನು ಊಟ ಬಡಿಸಿ ಕೊಟ್ಟರೆ ಮಾಡುತ್ತಿಲ್ಲ ವಿನಾಃ ಕಾರಣ ಬಯ್ಯುತ್ತಾರೆ ಎಂದು ಕೆಲವು ಬಾರಿ ಆಕೆ ಹೇಳಿದ್ದಳು.

ನಾವು ಅವಳ ಮನೆಗೆ ಹೋಗಿ ಸಮಧಾನ ಹೇಳಿ ಬಂದದ್ದು ಇದೆ. ನಿನ್ನೆ ನಾವು ಹೋದಾಗ ಹರೀಶ್‌ ಅವರನ್ನು ವಿಚಾರಿಸಿದೆವು. ಆತ ನಾನು ಕಾಲೇಜಿಗೆ ಹೋಗಿದ್ದೆ ಸಂಜೆ ಬರುವ ಶ್ರುತಿ ಮನೆಯಲ್ಲಿ ಇರಲಿಲ್ಲ. ಬಳಿಕ ಇದ್ದ ಕೊಕ್ಕೊವನ್ನು ತೆಗೆದು ಕುಕ್ಕುಜಡ್ಕಕ್ಕೆ ಹೋಗಿ ಕೊಟ್ಟು ಬಂದೆ. ವಾಪಾಸ್ಸು ಬರುವಾಗಲು ಅವಳು ಮನೆಯಲ್ಲಿ ಇರಲಿಲ್ಲ. ಬಳಿಕ ನಾನು ಮನೆಯಲ್ಲಿ ಕೇಳಿದಾಗ ತೋಟಕ್ಕೆ ಹೋಗಿದ್ದಾಳೆ ಎಂದು ಹೇಳಿದರು.

Advertisement

ನಾನು ಹುಡುಕಿಕೊಂಡು ಹೋದಾಗ ಕೆರೆಯಲ್ಲಿ ಆಕೆಯು ಬಿದ್ದಿರುವುದು ಗೊತ್ತಾಯಿತು ಎಂದಷ್ಟೆ ಹೇಳಿದ್ದಾನೆ ಎಂದು ಶ್ರುತಿಯ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಸಾವಿನ ಬಗ್ಗೆ ಕಾರಣ ನಮಗೆ ತಿಳಿಯಬೇಕು. ಅದಕ್ಕಾಗಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next