Advertisement

ಅಪಘಾತದಲ್ಲಿ ಸಾವು: ಸಂಬಂಧಿಕರಿಗೆ ಸೂಚನೆ

09:10 AM Apr 03, 2019 | Team Udayavani |

ಉಡುಪಿ: ರವಿವಾರ ಅಂಬಲಪಾಡಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವ ನಾರಾಯಣ (60) ಅವರ ಸಂಬಂಧಿಕರು ಇನ್ನು ಕೂಡ ಪತ್ತೆಯಾಗಿಲ್ಲ. ಇವರು ಸುಮಾರು 20 ವರ್ಷಗಳಿಂದ ಅಂಬಲಪಾಡಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

Advertisement

ಬಿಲ್ಲವ ಸಮಾಜಕ್ಕೆ ಸೇರಿರುವ ಇವರು ಮೂಲತಃ ದ.ಕ. ಜಿಲ್ಲೆಯ ಪುತ್ತೂರಿನ ವರು. ತಂದೆಯ ಹೆಸರು ಕೊರಗಪ್ಪ. ಇವರ ಸಂಬಂಧಿಕರು ಮಡಿಕೇರಿಯಲ್ಲಿಯೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದ್ದು ಸಂಬಂಧಿಕರಿದ್ದಲ್ಲಿ ಉಡುಪಿ ನಗರ ಸಂಚಾರ ಪೊಲೀಸ್‌ ಠಾಣೆ (082-2521332)ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next