Advertisement

ಡಿಯರ್‌ ಕಣ್ಮಣಿಗೆ ಕಿಚ್ಚ ಸುದೀಪ್‌ ಸಾಥ್‌

09:41 AM Feb 20, 2021 | Team Udayavani |

ಬಿಗ್‌ಬಾಸ್‌ ಖ್ಯಾತಿಯ ಕಿಶನ್‌ ಬಿಳಗಲಿ, ಕ್ರಿಕೆಟರ್‌ ಪ್ರವೀಣ್‌ ಗೌಡ,ಸಾತ್ವಿಕಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಡಿಯರ್‌ ಕಣ್ಮಣಿ’ ಚಿತ್ರ ಇತ್ತೀಚೆಗೆ ಸೆಟ್ಟೇರಿತು.

Advertisement

ನಟ ಕಿಚ್ಚ ಸುದೀಪ್‌ “ಡಿಯರ್‌ ಕಣ್ಮಣಿ’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಜೊತೆಗೆ ಚಿತ್ರದ ಟೈಟಲ್‌ ಪೋಸ್ಟರ್‌ನ್ನು ಕೂಡಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ಸುದೀಪ್‌, “ಹೊಸಬರ ಚಿತ್ರತಂಡ ತುಂಬ ಶ್ರಮವಹಿಸಿ ಈ ಸಿನಿಮಾದ ಕೆಲಸ ಮಾಡುತ್ತಿದೆ. ಖಂಡಿತಾ ನಾನು ಇಲ್ಲಿ ಯಾರಿಗೂ ನನ್ನ ಅನುಭವ ಹೇಳಿ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಬಂದಿಲ್ಲ. ಅವರ ಸರಿ-ತಪ್ಪುಗಳ ಜೊತೆಗೆ ಸ್ವಂತ ‌ಅನುಭವದಿಂದ ಒಳ್ಳೆಯ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ’ ಎಂದರು.

ಇದನ್ನೂ ಓದಿ:ಹೇಗಿದೆ ಸಿನಿಮಾ: ಪೊಗರು ಶಿವ ಅಡ್ಡದಲ್ಲಿ ಎಲ್ಲವೂ ಹೈವೋಲ್ಟೇಜ್‌!

ಇನ್ನು “ಡಿಯರ್‌ ಕಣ್ಮಣಿ’ ಚಿತ್ರವನ್ನು “ವಿಸ್ಮಯಾ ಫಿಲಂಸ್‌’ ಬ್ಯಾನರ್‌ ಅಡಿಯಲ್ಲಿ ವಿಸ್ಮಯಾ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು “ಡಿಯರ್‌ ಕಣ್ಮಣಿ’ ಚಿತ್ರದ ಮೂಲಕ ವಿಸ್ಮಯಾ ಗೌಡ ನಿರ್ದೇಶಕಿಯಾಗಿಯೂ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕಿ ಕಂ ನಿರ್ದೇಶಕಿ ವಿಸ್ಮಯಾ ಗೌಡ, “ಇದೊಂದು ಲವ್‌ ಜಾನರ್‌ ಸಿನಿಮಾ. ಮೂರು ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ. ಹಾಗಂದ ಮಾತ್ರಕ್ಕೆ ಇದು ಟ್ರೈಯಾಂಗಲ್‌ ಲವ್‌ ಸ್ಟೋರಿ ಎಂದುಕೊಳ್ಳಬೇಕಿಲ್ಲ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಬ್ಜೆಕ್ಟ್ ಸಿನಿಮಾ. ತುಂಬ ಚೆಂದದ ಕಥೆ ಇದರಲ್ಲಿದೆ. ಸ್ನೇಹಿತರೆಲ್ಲ ಸೇರಿಕೊಂಡು ಸ್ಕ್ರಿಪ್ಟ್ ಮೇಲೆ ನಂಬಿಕೆ ಇಟ್ಟು ಈ ಸಿನಿಮಾ ಮಾಡುತ್ತಿದ್ದೇವೆ. ಮಡಿಕೇರಿ, ಮೈಸೂರಿನಲ್ಲಿ ಸುತ್ತಮುತ್ತ ಸಿನಿಮಾದ ಶೂಟಿಂಗ್‌ ಮಾಡುವ ಪ್ಲಾನ್‌ ಇದೆ’ ಎಂದರು.

ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಕಿಶನ್‌ ಲವರ್‌ ಬಾಯ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಾಯಕಿ ಸಾತ್ವಿಕಾ ಲವ್ಲಿ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರಕ್ಕೆ ಮಧುಸೂದನ್‌ ಛಾಯಾಗ್ರಹಣ, ರಾಮಿಶೆಟ್ಟಿ ಪವನ್‌ ಸಂಕಲನವಿದೆ.

ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತವಿದ್ದು, ಜಯಂತ್‌ ಕಾಯ್ಕಿಣಿ, ಗೌಸ್‌ಪೀರ್, ಸಚಿನ್‌ ಸಾಹಿತ್ಯವಿದೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡು “ಡಿಯರ್‌ ಕಣ್ಮಣಿ’ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷದ ಕೊನೆಗೆ ಈ ಲವ್‌ಸ್ಟೋರಿಯನ್ನು ತೆರೆಮೇಲೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next