Advertisement

ವಿದ್ಯಾರ್ಥಿಗಳ ಅಳಲಿಗೆ ಕಿವುಡಾದ ಸರಕಾರ

11:04 PM Oct 10, 2019 | sudhir |

ಕಾಸರಗೋಡು: ಒಂದೆಡೆ “ಭಾಷಾ ಅಲ್ಪಸಂಖ್ಯಾಕರ ಸಾಂವಿಧಾನಿಕ ಹಕು Rಗಳನ್ನು ರಕ್ಷಿಸಲಾಗುವುದು’ ಎಂದು ಮಂಜೇಶ್ವರ ವಿಧಾನಸಭಾ ಉಪಚುನಾ ವಣೆ ಪ್ರಚಾರದಲ್ಲಿ ವಿವಿಧ ಪಕ್ಷಗಳ ಮುಖಂಡರು ಹೇಳಿಕೊಂಡು ಬರುತ್ತಿದ್ದರೆ ಇನ್ನೊಂದೆಡೆ ಕನ್ನಡ ಶಾಲೆಗಳಲ್ಲಿ ಮತ್ತೆ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕರಾಳ ವಾಗಿಸಲು ರಾಜ್ಯ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ.

Advertisement

ಕನ್ನಡ ಶಾಲೆಗಳಿಗೆ ಕನ್ನಡ ತಿಳಿದವರನ್ನೇ ಶಿಕ್ಷಕರನ್ನಾಗಿ ನೇಮಿಸಬೇಕೆಂಬ ಕನ್ನಡ ವಿದ್ಯಾರ್ಥಿಗಳ ಪೋಷಕರ ಸಂಘಟನೆಗಳ ಹೋರಾಟಕ್ಕೆ ಕಿವುಡಾದ ಸರಕಾರ ಈ ಸಮಸ್ಯೆಗೆ ಯಾವುದೇ ಪರಿಹಾರವನ್ನು ಕೈಗೊಳ್ಳುತ್ತಿಲ್ಲ. ಸರಕಾರದ ಈ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯಕ್ಕೆ ಕನ್ನಡಿಗರ ವಲಯದಲ್ಲಿ ಭಾರೀ ಆಕ್ರೋಶ ಕಂಡುಬರುತ್ತಿದ್ದು ಇದು ಮಂಜೇಶ್ವರ ಉಪ ಚುನಾವಣೆಯಲ್ಲಿ ಪ್ರತಿಫಲಿಸುವ ಸಾಧ್ಯತೆಯಿದೆ.

ಕನ್ನಡ ಶಾಲೆಗಳಿಗೆ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸುತ್ತಿರುವುದರಿಂದ ಭಾಷಾ ಅಲ್ಪಸಂಖ್ಯಾಕರಿಗೆ ಮಾತೃ ಭಾಷೆಯಲ್ಲಿ ಕಲಿಯುವ ಸಾಂವಿಧಾನಿಕ ಅವಕಾಶಕ್ಕೆ ಹಾಗೂ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗಲಿದೆ. ಸಾರ್ವಜನಿಕ ಶಿಕ್ಷಣ ರಂಗವನ್ನು ಉಳಿಸುತ್ತಿರುವವರೆಂದು ಹೇಳಿ ಕೊಳ್ಳುತ್ತಿರುವ ಸಿ.ಪಿ.ಎಂ. ಪಕ್ಷದ ನೇತೃತ್ವದ ಎಡರಂಗ ಸರಕಾರ ಕಲಿಸುವ ಮಾಧ್ಯಮದ ಭಾಷೆಯನ್ನೇ ತಿಳಿಯದ ಶಿಕ್ಷಕರನ್ನು ನೇಮಿಸುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿರುವ ಸರಕಾರಿ ಶಾಲೆಗಳ ಕನ್ನಡ ಮಾಧ್ಯಮ ವಿಭಾಗವನ್ನು ಮುಚ್ಚಿಸಿ ಖಾಸಗಿ ಶಾಲೆಗಳಿಗೆ ನೆರವಾಗಲು ಹೊರಟಿದೆಯೇ ಎಂಬ ಗುಮಾನಿ ಮೂಡುತ್ತಿದೆ.

ಕನ್ನಡ ತಿಳಿಯದಿದ್ದರೂ ಕೇರಳ ಲೋಕಸೇವಾ ಆಯೋಗದಿಂದ ಅಕ್ರಮವಾಗಿ ಆಯ್ಕೆಯಾದ ಈ ಅನರ್ಹ ಶಿಕ್ಷಕರಿಗೆ ಕನ್ನಡದಲ್ಲಿ ಮೂರು ಗಂಟೆಗಳ ವಿವರಣಾತ್ಮಕ ಲಿಖೀತ ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆಯಾದರೆ ಮಾತ್ರ ಕನ್ನಡ ಮಾಧ್ಯಮ ತರಗತಿಗಳಿಗೆ ಪಾಠ ಮಾಡಲು ಅನುಮತಿ ನೀಡಬೇಕೆಂದೂ ಇಲ್ಲವಾದರೆ ಅವರನ್ನು ಮಲಯಾಳ ಮಾಧ್ಯಮಕ್ಕೆ ಅಥವಾ ತತ್ಸಮಾನ ಹುದ್ದೆಗಳಿಗೆ ವರ್ಗಾಯಿಸಿ ಕನ್ನಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂಬುದು ಕನ್ನಡಿಗರ ಒತ್ತಾಯವಾಗಿದೆ. ಆದರೆ ಇದಕ್ಕೆ ಕಿವಿಗೊಡದ ಸರಕಾರ ಮತ್ತೆ ಇಬ್ಬರು ಕನ್ನಡ ಬಾರದ ಸಮಾಜ ವಿಜ್ಞಾನ ಅಧ್ಯಾಪಕರ ನೇಮಕಕ್ಕೆ ಸಿದ್ಧತೆ ನಡೆಸಿದೆ. ಬೇಕಲ, ಉದುಮ ಶಾಲೆಗಳಿಗೆ ಇವರಿಗೆ ನೇಮಕಾತಿ ನೀಡಲಾಗಿದೆ.

ಮಕ್ಕಳ ಉಪವಾಸಕ್ಕೂ ಮಣಿಯದ ಸರಕಾರ
ಮಂಗಲ್ಪಾಡಿ, ಪೈವಳಿಕೆ, ಬೇಕೂರು, ಪೆರಡಾಲ, ಬಂದಡ್ಕ ಮೊದಲಾದ ಶಾಲೆಗಳಿಗೆ ಈಗಾಗಲೇ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ಧರಣಿ, ತರಗತಿ ಬಹಿಷ್ಕಾರ, ಉಪವಾಸ ಸತ್ಯಾಗ್ರಹ, ದೂರು ಮನವಿಗಳ ಸಮರ್ಪಣೆ, ನ್ಯಾಯಾಂಗ ಹೋರಾಟ ಮೊದಲಾದ ಎಲ್ಲ ಹೋರಾಟಗಳನ್ನೂ ಕನ್ನಡಿಗ ವಿದ್ಯಾರ್ಥಿಗಳು ಪೋಷಕರು ಕೈಗೊಂಡಿದ್ದರು. ಇದರ ಫಲವಾಗಿ ಇಬ್ಬರು ಶಿಕ್ಷಕರನ್ನು ವೇತನ ಸಹಿತ ರಜೆಯಲ್ಲಿ ಕನ್ನಡ ಕಲಿಯಲು ಮೈಸೂರಿನ ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರಕ್ಕೆ ಕಳುಹಿಸಿ ಸರಕಾರ ಆದೇಶ ಹೊರಡಿಸಿತ್ತು. ಆದರೆ ಹಿಂದಿನ ಅನುಭವಗಳ ಆಧಾರದಲ್ಲಿ ಇವರು ಕನ್ನಡ ಕಲಿತು ಕನ್ನಡದಲ್ಲಿ ಪಾಠ ಮಾಡಲು ಸಮರ್ಥರಾಗುವರೆಂಬ ವಿಶ್ವಾಸ ಕನ್ನಡಿಗರಿಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next