Advertisement

ಕಡಲಲ್ಲಿ ತೇಲಿ ಬಂದ ಕಡವೆ

09:40 AM Jul 23, 2019 | keerthan |

ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊರವಡಿ ಮಾಸ್ತಿ ತಾಂಡೇಲರ ಮನೆ ಸಮೀಪದ ಕಡಲಿನಲ್ಲಿ ಮೃತ ಕಡವೆಯೊಂದು ತೇಲಿ ಬಂದಿದ್ದು, ಮಂಗಳವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.

Advertisement

ರಾತ್ರಿ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಇದೇ ಕಾರಣನಕ್ಕಾಗಿ ಕಡವೆ ತೇಲಿ ಬಂದಿರಬಹುದು ಎಂದು ಸಂಶಯಿಸಲಾಗಿದೆ. ಇಂದು ಮುಂಜಾನೆ ಸುಮಾರು 5.30ರ ಸುಮಾರಿಗೆ ಸ್ಥಳಿಯರಿಗೆ ಕಡವೆಯ ಮೃತದೇಹ ಕಂಡು ಬಂದಿತ್ತು. ಬೀದಿ ನಾಯಿಗಳಿಂದ ರಕ್ಷಿಸುವ ಸಲುವಾಗಿ ಕಡವೆ ದೇಹವನ್ನು ತೀರದ ಸುರಕ್ಷಿತ ಸ್ಥಲಕ್ಕೆ ತರಲಾಯಿತು.

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಉದಯ್‌, ಗಾರ್ಡ್‌ ಶಂಕರ ಖಾರ್ವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಾದ ರಮೇಶ್‌ ಪುತ್ರನ್‌, ಸುಭಾಸ್‌ ಶ್ರೀಯಾನ್‌, ಸತೀಶ್‌, ಕೃಷ್ಣ, ರಾಜು, ರಾಮ ಅವರು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ತರಳಿ ಮಾನವೀಯತೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next