Advertisement
ಅಲ್ಲಾéವುದೋ ಬಸ್ಸು ಬಂದ್ದಾಗೆ ಆಯ್ತು ಅಂತಂದುಕೊಂಡು ಕೈ ಅಡ್ಡಹಾಕಿದೆ. ಆದರೆ, ಆ ಬಸ್ಸಿನ ಮುಂದಿದ್ದಿದ್ದು, ಆ್ಯಂಬುಲೆನ್ಸ್ ರೀತಿಯ ವ್ಯಾನ್. ಒಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವೃದ್ಧನ ಪಾರ್ಥೀವ ಶರೀರ ಅದರಲ್ಲಿತ್ತು. ಆ ಶರೀರ, ಕಡೂರನ್ನು ತಲುಪಬೇಕಿತ್ತು. ಅದು ಅಂಬ್ಯುಬುಲೆನ್ಸ್ ಅನ್ನೋದಷ್ಟೇ ಗೊತ್ತಿದ್ದಿದ್ದ ನನಗೆ, ಡ್ರೈವರ್ ಗಾಡಿ ನಿಲ್ಲಿಸಿ, ನನ್ನನ್ನು ಮೇಲಕ್ಕೆ ಹತ್ತಿಸಿಕೊಂಡಾಗಲೇ, ನನಗೆ ಅದರೊಳಗೆ ಪಾರ್ಥಿವ ಶರೀರ ಇದ್ದ ವಿಚಾರ ಗೊತ್ತಾಗಿದ್ದು. ಡ್ರೈವರ್ನ ಪಕ್ಕದಲ್ಲಿ ಗಂಡನನ್ನು ಕಳೆದುಕೊಂಡ ಅಜ್ಜಿ ಕುಳಿತಿದ್ದಳು. ತುಂಬಾ ದುಃಖದಲ್ಲಿದ್ದರು. ಆ ಅಜ್ಜಿಗೆ ಒಂದಿಷ್ಟು ಸಮಾಧಾನ ಹೇಳಲು ಯಾರೂ ಇಲ್ಲವೆಂಬ ಕಾರಣಕ್ಕೆ, ತನ್ನನ್ನು ಹತ್ತಿಸಿಕೊಂಡೆ ಎಂದು ಡ್ರೈವರ್ ಪಿಸುಮಾತಿನಲ್ಲಿ ಹೇಳಿದ. ನಾನು ನನ್ನೂರು ಗುಬ್ಬಿ ಬರುವ ತನಕವೂ ಆ ಅಜ್ಜಿಯ ದುಃಖಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೆ. ಗುಬ್ಬಿ ಬಂದಾಗ, ನಾನು ಇಳಿದೆ. ಆದರೆ, ಇವತ್ತಿಗೂ ಆ ಡ್ರೈವರ್, ಆ ಅಜ್ಜಿ ನನಗೆ ಕಾಡುತ್ತಲೇ ಇದ್ದಾರೆ. ಕೆಲವೊಮ್ಮೆ ಯಾಕಾದರೂ, ಆ ವಾಹನವನ್ನು ಹತ್ತಿದೆನೋ ಅಂತಲೂ ಅನ್ನಿಸಿದೆ.
Advertisement
ಡೆಡ್ ಬಾಡಿ ಇದ್ದ ವಾಹನ ಡ್ರಾಪ್ ಕೊಟ್ಟಿತು!
06:00 AM Jul 24, 2018 | |
Advertisement
Udayavani is now on Telegram. Click here to join our channel and stay updated with the latest news.