Advertisement

Mangaluru ಬ್ಯಾಂಕ್‌ ಉದ್ಯೋಗಿ ಮೃತದೇಹ ಹೊಟೇಲಿನ ಈಜುಕೊಳದಲ್ಲಿ ಪತ್ತೆ

12:08 AM Sep 12, 2023 | Team Udayavani |

ಮಂಗಳೂರು: ಕೇರಳದ ತಿರುವನಂತಪುರದ ನಿವಾಸಿ, ಬ್ಯಾಂಕ್‌ ಉದ್ಯೋಗಿ ಗೋಪು ಆರ್‌. ನಾಯರ್‌(38) ಅವರ ಮೃತದೇಹ ನಗರದ ಫ‌ಳ್ನೀರ್‌ ಸಮೀಪದ ಹೊಟೇಲೊಂದರ ಈಜುಕೊಳದಲ್ಲಿ ಪತ್ತೆಯಾಗಿದೆ.

Advertisement

ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ರವಿವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಅವರು ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಸಂಜೆ 4 ಗಂಟೆಗೆ ಈಜುಕೊಳಕ್ಕೆ ತೆರಳಿದ್ದರು. ಮದ್ಯ ಸೇವಿಸಿದ ಕಾರಣ ಈಜುವಾಗ ನಿಯಂತ್ರಣ ಕಳೆದು ಮುಳುಗಿ ಮೃತಪಟ್ಟಿ ರುವ ಸಾಧ್ಯತೆ ಇದೆ. ಮೃತದೇಹವನ್ನು ಬೆಳಗ್ಗೆ ಹೊಟೇಲ್‌ ಸಿಬಂದಿ ಪತ್ತೆ ಮಾಡಿದ್ದಾರೆ.

ಹೊಟೇಲ್‌ನಲ್ಲಿ ಅವರೊಬ³ರೇ ಉಳಿದುಕೊಂಡಿ ದ್ದರು. ಕೊಠಡಿಯಲ್ಲಿ ಮದ್ಯದ ಖಾಲಿ ಬಾಟಲಿ ಪತ್ತೆಯಾಗಿದೆ. ಘಟನೆಯ ದೃಶ್ಯ ಹೊಟೇಲ್‌ನ ಸಿಸಿ ಕೆಮರಾದಲ್ಲಿ ದಾಖಲಾಗಿದೆೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next