Advertisement

Panemangalore ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಮೃತದೇಹ ಪತ್ತೆ

12:04 AM Dec 03, 2023 | Team Udayavani |

ಬಂಟ್ವಾಳ: ಪಾಣೆಮಂಗಳೂರು ಪರಿಸರದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ ಸುಮಾರು 70ರ ಹರೆಯದ ವ್ಯಕ್ತಿಯ ಮೃತದೇಹ ನ. 29ರಂದು ತೋಡಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಭಿಕ್ಷಾಟನೆ ಮಾಡುತ್ತಿದ್ದ ಈ ವ್ಯಕ್ತಿಯು ಪಾಣೆಮಂಗಳೂರು ಶ್ಮಶಾನದ ಬಳಿ ಟೆಂಟ್‌ ಹಾಕಿ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಆದರೆ ಅವರ ಹೆಸರು, ಊರು ಯಾರಿಗೂ ಗೊತ್ತಿಲ್ಲ.

ನೇತ್ರಾವತಿ ನದಿ ಸಂಪರ್ಕದ ತೋಡಿನಲ್ಲಿ ಕವಚಿ ಹಾಕಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಮೃತದೇಹದ ಕೈಗಳನ್ನು ಬಟ್ಟೆಯಿಂದ ಸಡಿಲವಾಗಿ ಕಟ್ಟಿಕೊಂಡಿದ್ದು, ಕುತ್ತಿಗೆಗೆ ಬಟ್ಟೆಯಿಂದ ಸುತ್ತಿದ ಹಾಗೆ ಕಂಡುಬಂದಿದೆ. ಆದರೆ ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next