Advertisement

ಮಹಿಳೆಯನ್ನು ಕೊಂದು ಪ್ಲಾಸ್ಟಿಕ್ ಟರ್ಪಾಲಿನಲ್ಲಿ ಸುತ್ತಿ ಬಾವಿಗೆ ಎಸೆದರು!

09:36 AM Dec 24, 2019 | keerthan |

ಪಳ್ಳಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳ್ಮಣ್ ಗ್ರಾಮದ ಮಹಿಳೆಯ ಮೃತದೇಹ ಕಲ್ಯಾ ಗ್ರಾಮದ ಮನೆಯೊಂದರ ಬಾವಿಯಲ್ಲಿ ಪತ್ತೆಯಾಗಿದೆ. ಲಾಭಕ್ಕಾಗಿ ಕೊಲೆಗೈದು ಇಲ್ಲಿ ತಂದು ಹಾಕಿರಬಹುದಾದ ಶಂಕೆ ವ್ಯಕ್ತವಾಗಿದೆ.

Advertisement

ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೃಂದಾವನ ಮನೆ ನಿವಾಸಿ ಭರತಲಕ್ಷ್ಮೀ ಉಡುಪ (68) ಕೊಲೆಯಾದ ಮಹಿಳೆ.

ಕಲ್ಯಾ ಗ್ರಾಮದ ಮೂಡುಮನೆ ಶಕುಂತಲಾ ಎಂಬವರ ಮನೆಯಲ್ಲಿ ರವಿವಾರ ಸಂಜೆ ಏಳು ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಪ್ಲಾಸ್ಟಿಕ್ ಟರ್ಪಾಲಿನಲ್ಲಿ ಕಟ್ಟಿ ಬಾವಿಗೆಸಿದಿದ್ದರು. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತದೇಹ ಪತ್ತೆಯಾದ ಶಕುಂತಲಾ ಅವರ ಮನೆಯಲ್ಲಿ ಸಾಮಾನ್ಯವಾಗಿ ಯಾರೂ ಇರುತ್ತಿರಲಿಲ್ಲ. ಶಕುಂತಲಾ ಅವರು ಗಂಡನ ಮನೆಯಲ್ಲಿ ವಾಸವಿದ್ದು, ಅಪರೂಪಕ್ಕೆ ಈ ಮನೆಗೆ ಬರುತ್ತಿದ್ದರು. ಈ ವಿಷಯವನ್ನು ತಿಳಿದವರೇ ಶಕುಂತಲಾ ಅವರ ಮನೆಯ ಬಾವಿಗೆ ತಂದು ಹಾಕಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next