Advertisement

ನೈಸ್‌ ರಸ್ತೆ ಗುಂಡಿ ಮುಚ್ಚಲು ಡಿಸಿಎಂ ಸೂಚನೆ

11:31 AM Oct 09, 2019 | Team Udayavani |

ಬೆಂಗಳೂರು: ನೈಸ್‌ ರಸ್ತೆಯ ಗುಂಡಿಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೂಚನೆ ನೀಡಿದರು.

Advertisement

ನೈಸ್‌ ರಸ್ತೆಯ ಹೊಸೂರು ಜೆಂಕ್ಷನ್‌, ಬನ್ನೆರುಘಟ್ಟ ರಸ್ತೆ ಹಾಗೂ ಬನಶಂಕರಿ ರಸ್ತೆಗಳ ರ್‍ಯಾಂಪ್‌ನಲ್ಲಿ ವಾಹನ ಹೋಗಲು ಮತ್ತು ವಾಪಾಸಾಗುವ ಸಂದರ್ಭದಲ್ಲಿ ಸಾಕಷ್ಟು ಸಂಚಾರ ದಟ್ಟಣೆ ಜತೆಗೆ ರಸ್ತೆ ಪೂರ್ತಿ ಗುಂಡಿಯಾಗಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಭಾನುವಾರ ನೈಸ್‌ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ರಸ್ತೆಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಶೋಕ್‌ ಖೇಣಿಯವರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಸರ್ಕಾರ ಯಾವತ್ತೂ ಜನ ಸಾಮಾನ್ಯರ ಜತೆಗೆ ಇರುತ್ತದೆ. ಯಾವುದೂ ಕೂಡ ಸರ್ಕಾರಿ ವ್ಯವಸ್ಥೆಯಲ್ಲಿ ಬರುವುದಿಲ್ಲ ಎಂದು ಭಾವಿಸುವುದು ಬೇಕಾಗಿಲ್ಲ. ನೈಸ್‌ ರಸ್ತೆಯ ರ್‍ಯಾಂಪ್‌ಗ್ಳಲ್ಲಿ ಟ್ರಾಫಿಕ್‌ ಜಾಮ್‌ ಆಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಜತೆಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next