Advertisement

ರೈತರಿಗೆ ಡಿಸಿಸಿ ಬ್ಯಾಂಕ್ ನಿಂದ ಮೈಕ್ರೋ ಎಟಿಎಂ ಸೌಲಭ್ಯ

04:05 PM Nov 27, 2019 | keerthan |

ವಿಜಯಪುರ: ಜಿಲ್ಲೆಯ ರೈತರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಿನಿ ಎಟಿಎಂ ವ್ಯವಸ್ಥೆ ಜಾರಿಗೆ ತರುತ್ತಿದ್ದು, ಡಿಸೆಂಬರ್1 ರಿಂದ ಚಾಲನೆ ಪಡೆಯಲಿದೆ.

Advertisement

ಬುಧವಾರ ಡಿಸಿಸಿ ಬ್ಯಾಂಕ್ ಸಭೆಯ ಬಳಿಕ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಶಿವಾನಂದ ಪಾಟೀಲ, ಈ ಸೌಲಭ್ಯ ಹೊಂದುತ್ತಿರುವ ರಾಜ್ಯದ ಎರಡನೇ ಬ್ಯಾಂಕ್ ಎಂಬ ಹಿರಿಮೆ ವಿಡಿಸಿಸಿ ಬ್ಯಾಂಕಗೆ ಸಲ್ಲಲಿದೆ. ಉತ್ತರ ಕನ್ನಡ ಜಿಲ್ಲೆಯ ನಂತರ ರೈತರಿಗೆ ಮಿನಿ ಎಟಿಎಂ ಸೌಲಭ್ಯ ಅಳವಡಿಸಿಕೊಳ್ಳಲು ವಿಜಯಪುರ ಡಿಸಿಸಿ ಮುಂದಾಗಿದೆ ಎಂದರು

ಡಿಸಿಸಿ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಜಿಲ್ಲೆ 1.60 ಲಕ್ಷ ರೈತರಿಗೆ ಮಿನಿ ಎಟಿಎಂ ಬಳಕೆ ಕಡ್ಡಾಯವಾಗಲಿದೆ. ಇದರಿಂದ ಬೇನಾಮಿ ಸಾಲ ಪಡೆಯುವುದನ್ನು ತಪ್ಪಿಸಿ, ಪಾರದರ್ಶಕ ಆರ್ಥಿಕ ವಹಿವಾಟು ನಡೆಸಲು ನಮ್ಮ ಬ್ಯಾಂಕ್ ರೈತರಿಗೆ ಈ ಸೌಲಭ್ಯ ನೀಡುತ್ತಿದೆ. ಇದು ಯಾವುದೇ ಬ್ಯಾಂಕ್ ಎಟಿಎಂ ನಲ್ಲೂ ಬಳಸಬಹುದು, ಜೊತೆಗೆ ಐದು ಚೆಕ್ ಇರುವ ಚೆಕ್ ಬುಕ್ ಕೂಡ ವಿತರಿಸುತ್ತಿದ್ದೆ ಎಂದು ವಿವರಿಸಿದರು.

ಸದರಿ ಎಟಿಎಂ ಕಾರ್ಡ್ ನ್ನು ಕನಿಷ್ಟ 45 ದಿನಗಳಲ್ಲಿ ಒಂದುಬಾರಿ ನಿರ್ವಹಣೆ ಮಾಡುತ್ತಿದ್ದರೆ 3 ಲಕ್ಷ ರೂಪಾಯಿ ವಿಮೆ ಸೌಲಭ್ಯ ಸಿಗಲಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next