Advertisement

ತಾ|ಚುನಾವಣಾಧಿಕಾರಿ ಕಚೇರಿಗೆ ಡಿಸಿ ಭೇಟಿ

11:35 AM Apr 08, 2018 | Team Udayavani |

ಬೆಳ್ತಂಗಡಿ: ತಾಲೂಕು ಚುನಾವಣಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ, ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಚುನಾವಣಾಧಿಕಾರಿ ಎಚ್‌. ಆರ್‌. ನಾಯ್ಕ ಜತೆ ಚರ್ಚೆ ನಡೆಸಿ ತಾಲೂಕಿನ ಚುನಾವಣೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಬೂತ್‌ಮಟ್ಟದಲ್ಲಿ ನಡೆಯುತ್ತಿರುವ ಚುನಾವಣೆಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.

Advertisement

ಸುವಿಧಾ
ಆನ್‌ಲೈನ್‌ ನೋಂದಣಿ ನಡೆಸಿ, ರಾಜಕೀಯ ಪ್ರಚಾರಗಳ ಮಾಹಿತಿ ನೀಡುವ ಸುವಿಧಾ ತಾ|ನಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಲೂಕಿಗೆ ಈಗಾಗಲೇ 14 ಅಣಕು ಮತಯಂತ್ರಗಳನ್ನು ತರಲಾಗಿದ್ದು, ಎ. 10ರ ಬಳಿಕ ಜನರ ಬಳಿಗೆ ತೆರಳಿ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಈ ಬಾರಿ ಮತವನ್ನು ದೃಢೀಕರಿಸುವ ವಿಧಾನವನ್ನೂ ಮತದಾರರಿಗೆ ತಿಳಿಸಲಾಗುತ್ತಿದೆ.

ಅರಿವು ಆಂದೋಲನ
ಮತದಾನ ಪ್ರಕ್ರಿಯೆ ಕುರಿತು ಸೆಕ್ಟರ್‌ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಮಾಸ್ಟರ್‌ ಟ್ರೈನರ್‌ಗಳಿಗೆ ಎ. 9ರಂದು ತರಬೇತಿ ನೀಡಲಾಗುತ್ತಿದ್ದು, ಎ. 10ರ ಬಳಿಕ ಸಂಬಂಧಿಸಿದ ಮತಗಟ್ಟೆಗಳಿಗೆ ಅಧಿಕಾರಿಗಳು ಮತಯಂತ್ರಗಳ ಜತೆ ತೆರಳಿ ಮಾಹಿತಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next