Advertisement

ಗುಂಡ್ಲುಪೇಟೆ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಂಡದಿಂದ ಗಣಿಗಾರಿಕೆ ಸ್ಥಳಗಳ ತಪಾಸಣೆ

12:34 PM Mar 06, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಅಧಿಕಾರಿಗಳ ತಂಡ ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Advertisement

ತಾಲೂಕಿನ ಮಡಹಳ್ಳಿ ವ್ಯಾಪ್ತಿಯ 10ಕ್ಕು ಹೆಚ್ಚು ಗಣಿಗಾರಿಕೆ ಸ್ಥಳಗಳು, ಕೂತನೂರು, ಮಲ್ಲಯ್ಯನಪುರ, ಬೆಳಚಲವಾಡಿ, ಹಸಗೂಲಿ, ಹಿರೀಕಾಟಿ, ತೊಂಡವಾಡಿ, ಅರೇಪುರ, ರಂಗೂಪುರ, ಬೆಟ್ಟದಮಾದಹಳ್ಳಿ ಸೇರಿದಂತೆ ಬೇಗೂರು ಹೋಬಳಿಯ ಹಲವು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ, ಸಂಬಂಧಪಟ್ಟ ಕ್ವಾರೆಯ ಸ್ಥಳದ ಗಣಿ ಮಾಲೀಕರಿಂದ ದಾಖಲಾತಿ ತರಿಸಿಕೊಂಡು ಪರಿಶೀಲಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕ್ವಾರಿಯ ವಿಸ್ತೀರ್ಣ, ಗಣಿಗಾರಿಕೆ ನಡೆದಿರುವ ಪರಿಮಿತಿ, ಒತ್ತುವರಿ, ಕೊರೆದಿರುವ ಆಳ ಸೇರಿದಂತೆ ಇನ್ನಿತರ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ :ಬೆಳೆಯುತ್ತಿರುವುದು ಸಹಿಸಲಾಗದೇ ಕೆಲ ಕಿಡಿಗೇಡಿಗಳಿಂದ ಕೊಲೆ : ಹರ್ಷ ನಿವಾಸದಲ್ಲಿ ಬಿಎಸ್ ವೈ

ತಂಡದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ನಾಗಭೂಷಣ್, ಎಎಸ್ಪಿ ಸುಂದರ್ ರಾಜ್, ಉಪ ವಿಭಾಗ ಅಧಿಕಾರಿ ಗಿರೀಶ್, ಡಿವೈಎಸ್ಪಿ ಪ್ರಿಯದರ್ಶಿಣಿ ಸಾಣೆಕೊಪ್ಪ, ತಹಸೀಲ್ದಾರ್ ರವಿಶಂಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next