Advertisement

ಮತದಾನ ಹಕ್ಕಿನ ಮಹತ್ವ ತಿಳಿಸಲು ಬೈಕೇರಿದ ಜಿಲ್ಲಾಧಿಕಾರಿ

02:06 PM Mar 28, 2019 | keerthan |

ಬದಿಯಡ್ಕ : ಮತದಾನ ಹಕ್ಕಿನ ಮಹತ್ವ ತಿಳಿಸಲು ಕಾಸರಗೋಡು ಜಿಲ್ಲಾಧಿಕಾರಿ ಬೈಕೇರಿ ಪರ್ಯಟನೆ ನಡೆಸಿದ್ದಾರೆ. ನನ್ನ ಮತದಾನ ನನ್ನ ಹಕ್ಕು ಎಂಬ ಸಂದೇಶದೊಂದಿಗೆ ಚುನಾವಣೆ ಆಯೋಗದ ಪ್ರಚಾರ ವಿಭಾಗವಾಗಿರುವ ಸ್ವೀಪ್‌ ವತಿಯಿಂದ ಬೋವಿಕ್ಕಾನದಲ್ಲಿ ಬುಲ್ಲೆಟ್‌ ಬೈಕ್‌ ರ್ಯಾಲಿ ನಡೆದಿದೆ.

Advertisement

ಇದರ ಉದ್ಘಾಟನೆ ಹೊಣೆ ಹೊತ್ತಿದ್ದ ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು ಬೈಕ್‌ ಏರಿ ಸಂಚಾರ ನಡೆಸುವ ಮೂಲಕ ತಮ್ಮ ಕರ್ತವ್ಯ ನಡೆಸಿದ್ದಾರೆ. ಸ್ವೀಪ್‌ ನೋಡೆಲ್‌ ಅಧಿಕಾರಿ ವಿ. ಮಹಮ್ಮದ್‌ ನೌಷಾದ್‌ ಮತದಾನದ ಸಂದೇಶ ನೀಡಿದರು. ಕಾಸರಗೋಡಿನಿಂದ ವಿವಿಧ ಬೈಕ್‌ ರೈಡರ್ಸ್‌ ಕ್ಲಬ್‌ ಪ್ರತಿನಿಧಿಗಳಾದ 15 ಮಂದಿ ಸವಾರರು ಯಾತ್ರೆಯಲ್ಲಿ ಭಾಗವಹಿಸಿದರು.

ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಈ ರ್ಯಾಲಿ ನಡೆಯಿತು. ಕುತ್ತಿಕೋಲು, ಪನತ್ತಡಿ, ಮಾವುಂಗಾಲ್‌ ಕಾಞಂಗಾಡ್‌, ಮೇಲ್ಪರಂಬ, ಕಾಸರಗೋಡು ಪ್ರದೇಶಗಳಲ್ಲಿ ಮತದಾನ ಸಂದೇಶ ನೀಡಲಾಯಿತು. ಸಹಕಾರಿ ಇನ್ಸ್‌ಪೆಕ್ಟರ್‌ರಾದ ಪಿ.ಬೈಜು ರಾಜ್‌, ಕೆ.ಸಿ.ಸತೀಶ್‌ ಅವರ ನೇತೃತ್ವದಲ್ಲಿ ಬೈಕ್‌ ರ್ಯಾಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next