Advertisement

ಪರ್ಯಾಯ ಸಾರಿಗೆ ಸೌಲಭ್ಯ ಒದಗಿಸಲು ಡಿಸಿ ಕ್ರಮ

05:28 PM Apr 05, 2021 | Team Udayavani |

ಬೆಳಗಾವಿ: ಸಾರಿಗೆ ಸಂಸ್ಥೆಯ ನೌಕರರು ಏ. 7 ರಿಂದ ಅನಿರ್ದಿಷ್ಟಅವಧಿಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆತೊಂದರೆಯಾಗದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದವಿವಿಧ ವರ್ಗಗಳ ವಾಹನಗಳಪ್ರವರ್ತಕರ ಸಂಘದ ಪ್ರತಿನಿಧಿ ಗಳುಹಾಗೂ ಪ್ರವರ್ತಕರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸಾರಿಗೆ ಸಂಸ್ಥೆಯ ನೌಕರರುಮುಷ್ಕರ ಆರಂಭಿಸಿದರೆಸಾರ್ವಜನಿಕರಿಗೆ ಅನಾನುಕೂಲಆಗದಂತೆ ಖಾಸಗಿ ಪ್ರವರ್ತಕರಿಗೆಕೆಲ ಮಾರ್ಗಗಳಲ್ಲಿ ಮೋಟಾರುವಾಹನ ಕಾಯ್ದೆ ಅಡಿಯಲ್ಲಿ ತಾತ್ಕಾಲಿಕಪರ್ಮಿಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಖಾಸಗಿ ಬಸ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳಿಗೆ ಏ. 7ರಿಂದ ಈ ರೀತಿಯ ತಾತ್ಕಾಲಿಕ ಪರ್ಮಿಟ್‌ಗಳನ್ನು ನೀಡಬಹುದಾಗಿದೆ. ಬಸ್‌, ಮ್ಯಾಕ್ಸಿ ಕ್ಯಾಬ್‌ ಅಲ್ಲದೇ ಅಗತ್ಯಬಿದ್ದರೆ ಇನ್ನಿತರ ವಾಹನಗ‌ಳಿಗೂಪರ್ಮಿಟ್‌ ನೀಡಿ ಸಾರ್ವಜನಿಕರಅನುಕೂಲಕ್ಕೆ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಯಾಣಿಕರ ಶೋಷಣೆ; ಕಠಿಣ ಕ್ರಮದ ಎಚ್ಚರಿಕೆ: ರಾಜ್ಯ ಸಾರಿಗೆ ನೌಕರರ ಒಕ್ಕೂಟ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಸಂದರ್ಭದಲ್ಲಿ ಇತರೆ ಖಾಸಗಿ ಪ್ರವರ್ತಕರು, ಸಾರಿಗೆಸಂಸ್ಥೆಯವರು ಅತೀ ಹೆಚ್ಚು ದರ ಆಕರಿಸುವ ಮೂಲಕ ಪ್ರಯಾಣಿಕರಶೋಷಣೆ ಮಾಡಿದರೆ ಅಂಥವರ ವಿರುದ್ಧ ಕಾನೂನುಪ್ರಕಾರ ಕಠಿಣ ಕ್ರಮತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್‌ ಎಚ್ಚರಿಕೆ ನೀಡಿದರು. ಮುಷ್ಕರ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರಕೈಗೊಳ್ಳುವ ನಿರ್ಧಾರಗಳಿಗೆ ಎಲ್ಲಖಾಸಗಿ ಸಾರಿಗೆ ಪ್ರವರ್ತಕರುಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಮುಷ್ಕರ ಸಂದರ್ಭದಲ್ಲಿ ಜಿಲ್ಲಾಡಳಿತ ಅಥವಾ ಸರ್ಕಾರದನಿರ್ದೇಶನಗಳ ಪ್ರಕಾರಸಾರ್ವಜನಿಕರಿಗೆ ಸಾರಿಗೆ ಸೌಲಭ್ಯಒದಗಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪ್ರವರ್ತಕರುಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ್‌ ರೆಡ್ಡಿ,ವಾಯವ್ಯ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿ ಕಾರಿಎಂ.ಆರ್‌. ಮುಂಜಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್‌, ಚಿಕ್ಕೋಡಿಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ, ಬೈಲಹೊಂಗಲ ಎ.ಆರ್‌ .ಟಿ.ಒ. ನಾಗೇಶ ಮುಂಡಾಸ, ರಾಮದುರ್ಗ ಎ.ಆರ್‌.ಟಿ.ಒ.ಧರ್ಮರಾಜ ಪವಾರ, ಗೋಕಾಕಎ.ಆರ್‌.ಟಿ.ಒ ಹೇಮಾವತಿ,ನಾಗರಿಕ ವೇದಿಕೆ ಅಧ್ಯಕ್ಷ ವಿಕಾಸಕಲಘಟಗಿ ಹಾಗೂ ವಿವಿಧ ಖಾಸಗಿಸಾರಿಗೆ ಸಂಸ್ಥೆಗಳ ಪ್ರವರ್ತಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next