Advertisement

ದಯಾನಂದ ಸಾಗರ್‌ ಆಸ್ಪತ್ರೆಗೆ ಡಿಕೆಸು ಭೇಟಿ

05:12 PM May 12, 2021 | Team Udayavani |

ಕನಕಪುರ: ಸಂಸದ ಡಿ.ಕೆ.ಸುರೇಶ್‌ ಕೊರೊನಾಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ದಯಾನಂದ ಸಾಗರ್‌ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್‌ ಮತ್ತು ಬೆಡ್‌ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.

Advertisement

ತಾಲೂಕಿನ ಮರಳವಾಡಿ ಹೋಬಳಿಯ ದೇವರಕಗ್ಗಲಹಳ್ಳಿ ಬಳಿ ಇರುವ ದಯಾನಂದ್‌ ಸಾಗರ್‌ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಪರಿಶೀಲನೆನಡೆಸಿ ಆಡಳಿತ ಮಂಡಳಿ ಮತ್ತು ವೈದ್ಯರ ಜೊತೆ ಸಭೆ ನಡೆಸಿದರು. ಆಸ್ಪತ್ರೆಯಲ್ಲಿ ಎಷ್ಟು ಕೊರೊನಾಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರಆರೋಗ್ಯ ಸ್ಥಿತಿ ಹೇಗಿದೆ ಆಸ್ಪತ್ರೆಯಲ್ಲಿ ಯಾವೆಲ್ಲಸೌಲಭ್ಯಗಳಿವೆ ಮತ್ತು ಸಮಸ್ಯೆಗಳ ಬಗ್ಗೆ ಚೆರ್ಚೆನಡೆಸಿ ಮಾಹಿತಿ ಪಡೆದುಕೊಂಡರು. ತಾಲೂಕಿನಲ್ಲಿಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಿಸುವಂತೆ ಸಲಹೆಸೂಚನೆ ನೀಡಿದರು.ಇದಕ್ಕೆ ಪತ್ರಿಕ್ರಿಯಿಸಿದ ಆಸ್ಪತ್ರೆ ವೈದ್ಯರು ಮತ್ತುಆಡಳಿತ ಮಂಡಳಿ ಆಕ್ಸಿಜನ್‌ ಪೂರೈಕೆ ಮಾಡಿದರೆಇನ್ನಷ್ಟು ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಿಸುವುದಾಗಿಭರವಸೆ ನೀಡಿದರು.

ಜಿಲ್ಲಾ ಪಂಚಾಯತ್‌ ಮಾಜಿಅಧ್ಯಕ್ಷ ಇಕ್ಬಾಲ್‌ ಹುಸೇನ್‌, ಜಿಲ್ಲಾ ವೈದ್ಯಾಧಿಕಾರಿಡಾ.ನಿರಂಜನ್‌, ಆಸ್ಪತ್ರೆಯ ಡೀನ್‌ ಡಾ.ಅಶೋಕ್‌ಹಾಗೂ ಆಸ್ಪತ್ರೆಯ ಪ್ರಮುಖ ವೈದ್ಯರುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next