Advertisement

ಕಾಂಗ್ರೆಸ್‌ಗೆ ಇದು ದುರಂತದ ದಿನ:ರಾಹುಲ್‌ ಗಾಂಧಿ ತೀವ್ರ ಸಂತಾಪ 

04:09 PM Nov 25, 2018 | |

ಹೊಸದಿಲ್ಲಿ: ಮೇರು ನಟ ಅಂಬರೀಶ್‌ ಮತ್ತು ಮಾಜಿ ಕೇಂದ್ರ ಸಚಿವ ಜಾಫ‌ರ್‌ ಷರೀಫ್ ಅವರ ನಿಧನ ಕಾಂಗ್ರೆಸ್‌ ಪಾಲಿಗೆ ದುರಂತ ದಿನ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಟ್ವೀಟ್‌ ಮಾಡಿದ್ದಾರೆ.

Advertisement

ಇದು ಕಾಂಗ್ರೆಸ್‌ ಪಾಲಿಗೆ ದುರಂತ ದಿನ.ಇನ್ನೋರ್ವ ಹಿರಿಯ ಕಾಂಗ್ರೆಸ್‌ ನಾಯಕ ಕರ್ನಾಟಕ ಕುಟುಂಬದ ಜಾಫ‌ರ್‌ ಷರೀಫ್ ಅವರು ನಿಧನ ಹೊಂದಿದ್ದಾರೆ. ಅವರ ಕುಟುಂಬ ಸದಸ್ಯರಿಗೆ, ಮಿತ್ರರಿಗೆ ಮತ್ತು ಬೆಂಬಲಿಗರಿಗೆ  ನನ್ನ ಸಂತಾಪಗಳು ಎಂದು ಟ್ವೀಟ್‌ ಮಾಡಿದ್ದಾರೆ.

85 ರ ಹರೆಯದ ಹಿರಿಯ ಕಾಂಗ್ರೆಸ್‌ ನಾಯಕ ಜಾಫ‌ರ್‌ ಷರೀಫ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರು ಶನಿವಾರ ರಾತ್ರಿ ನಿಧನ ಹೊಂದಿದ್ದರು. ಇಬ್ಬರು ನಾಯಕರ ನಿಧನದಿಂದ ಕಾಂಗ್ರೆಸ್‌ ಪಕ್ಷಕ್ಕೆ  ತುಂಬಲಾರದ ನಷ್ಟ ಎನ್ನಬಹುದು. 

Advertisement

Udayavani is now on Telegram. Click here to join our channel and stay updated with the latest news.

Next