Advertisement

ದಾವೂದ್‌ ತಮ್ಮನಿಗೆ ಬಿರಿಯಾನಿ, ಸಿಗರೆಟ್‌

06:00 AM Oct 28, 2018 | |

ಥಾಣೆ: ವಸೂಲಿ ಪ್ರಕರಣದಲ್ಲಿ ಬಂಧಿತ ನಾಗಿರುವ ಭೂಗತಪಾತಕಿ ದಾವೂದ್‌ ಇಬ್ರಾಹಿಂ ಸಹೋದರ ಇಕ್ಬಾಲ್‌ ಕಸ್ಕರ್‌ಗೆ ಜೈಲಿನಲ್ಲಿ ಪೊಲೀಸರು ರಾಜಾತಿಥ್ಯ ಕಲ್ಪಿಸಿರುವ ಅಂಶ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬ ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಗೊಳಿಸಲಾಗಿದೆ. 

Advertisement

ಗುರುವಾರ ಕಸ್ಕರ್‌ನನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲು ಕೋರ್ಟ್‌ ಆದೇಶ ನೀಡಿತ್ತು. ತಪಾಸಣೆ ವೇಳೆ ಕಸ್ಕರ್‌ಗೆ ವಿಶೇಷ ಆತಿಥ್ಯ ನೀಡುತ್ತಿದ್ದ ದೃಶ್ಯವನ್ನು ಖಾಸಗಿ ಸುದ್ದಿವಾಹಿನಿಯೊಂದು ಚಿತ್ರೀಕರಿಸಿ, ಪ್ರಸಾರ ಮಾಡಿತ್ತು. ವಿಡಿಯೋದಲ್ಲಿ ಕಸ್ಕರ್‌ ಪೊಲೀಸರ ಸಮ್ಮುಖದಲ್ಲೇ ಸಿಗರೆಟ್‌ ಸೇದಿದ್ದು, ಅವರಿಗೆ ಹಣ ನೀಡಿದ್ದು ಮತ್ತು ಪೊಲೀಸ್‌ ಸಿಬ್ಬಂದಿಯೊಬ್ಬರು ಕಸ್ಕರ್‌ಗೆ ಬಿರಿಯಾನಿ ತಂದುಕೊಟ್ಟಿದ್ದು ಸೆರೆಯಾಗಿದೆ. ಈ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಥಾಣೆ ಪೊಲೀಸ್‌ ವಿಭಾಗದ ಜಂಟಿ ಕಾರ್ಯದರ್ಶಿ ಮಧುಕರ್‌ ಪಾಂಡೆ ಕ್ರಮ ತೆಗೆದುಕೊಂಡು, ಅಮಾನತು ಆದೇಶ ನೀಡಿದ್ದಾರೆ. ಆದರೆ ಅಮಾನತು ಗೊಂಡ ಪೊಲೀಸರು ಹೆಸರುಗಳನ್ನು ಅವರು ಬಹಿರಂಗಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next