Advertisement

ಭಾರತಕ್ಕೆ ಬರ್ತಾನಂತೆ ದಾವೂದ್‌

09:00 AM Mar 07, 2018 | Harsha Rao |

ಹೊಸದಿಲ್ಲಿ: ಮುಂಬಯಿ ಸರಣಿ ಸ್ಫೋಟದ ರೂವಾರಿ ಹಾಗೂ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸದ್ಯದಲ್ಲೇ ವಾಪಸಾಗಿ ಭಾರತ ಸರಕಾರದ ಮುಂದೆ ಶರಣಾಗಲಿದ್ದಾನೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

Advertisement

ಕಳೆದ ವರ್ಷ, ಮುಂಬಯಿಯಲ್ಲಿ ಬಂಧಿತನಾಗಿದ್ದ ದಾವೂದ್‌ ಇಬ್ರಾಹಿಂನ ಸಹೋದರ ಇಕ್ಬಾಲ್‌ ಕಸ್ಕರ್‌ಪರ ವಾದ ಮಂಡಿಸುತ್ತಿರುವ ವಕೀಲರೊಬ್ಬರು, ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ಥಾನದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ದಾವೂದ್‌ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿದ್ದಾನೆ ಎಂದಿರುವ ಕಸ್ಕರ್‌ ಪರ ವಕೀಲರು, ತನ್ನ ಹಿಂದಿರುಗುವಿಕೆ ಕುರಿತಂತೆ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರ ಬಳಿ ದಾವೂದ್‌ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ.

“ಮುಂಬಯಿಗೆ ಬಂದಿಳಿದ ಕೂಡಲೇ ತನ್ನನ್ನು ಪೊಲೀಸರು ಬಂಧಿಸುತ್ತಾರೆಂಬ ಖಚಿತತೆಯೂ ದಾವೂದ್‌ಗೆ ಇದೆ. ಆದರೆ, ಬಂಧನಕ್ಕೆ ತಾನು ಸಿದ್ಧನಿರುವುದಾಗಿ ಹೇಳಿರುವ ದಾವೂದ್‌, ತನ್ನ ಮೇಲೆ ಎಷ್ಟಾದರೂ ಪ್ರಕರಣಗಳನ್ನು ದಾಖಲಿಸಲಿ, ಅವುಗಳನ್ನು ಎದುರಿಸಲು ತಾನು ಸಿದ್ಧ ಎಂದು ತಿಳಿಸಿದ್ದಾನೆ. ಆದರೆ, ಬಂಧಿಸಿದ ಅನಂತರ, ನನ್ನನ್ನು ಮುಂಬಯಿಯ ಆರ್ಥರ್‌ ರಸ್ತೆಯ ಜೈಲಿನಲ್ಲೇ ಇಡಬೇಕು ಎಂಬ ಷರತ್ತನ್ನೂ ಹಾಕಿದ್ದಾನೆ.

ತನ್ನ ಷರತ್ತಿಗೆ ಭಾರತ ಸರಕಾರ ಒಪ್ಪಿಕೊಂಡಲ್ಲಿ ಮಾತ್ರ ತಾನು ಮುಂಬಯಿಗೆ ಬರುವುದಾಗಿ ಆತ ಸ್ಪಷ್ಟವಾಗಿ ತಿಳಿಸಿದ್ದಾನೆ’ ಎಂದು ಕಸ್ಕರ್‌ ಪರ ವಕೀಲರು ತಿಳಿಸಿರುವುದಾಗಿ ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next