Advertisement
ಇಬ್ಬರೂ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ, ಮೂರನೇ ಟೆಸ್ಟ್ ವೇಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ ಎಂಬುದಾಗಿ “ಕ್ರಿಕೆಟ್ ಆಸ್ಟ್ರೇಲಿಯ’ (ಸಿಎ) ತಿಳಿಸಿದೆ. ಇವರಿಬ್ಬರಿಗೆ ಬದಲಿಯಾಗಿ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯ ಬೀಳದು ಎಂದೂ “ಸಿಎ’ ಹೇಳಿದೆ.
Related Articles
Advertisement
ಅಡಿಲೇಡ್ನಲ್ಲಿ ನಡೆದ ಪಿಂಕ್ ಟೆಸ್ಟ್ ಪಂದ್ಯದಲ್ಲಿ 36 ರನ್ನಿಗೆ ಕುಸಿದು ಹೀನಾಯ ಸೋಲಿಗೆ ತುತ್ತಾದ ಕಾರಣ, ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಬಹಳಷ್ಟು ಬದಲಾವಣೆ ಗೋಚರಿಸುವ ಸಾಧ್ಯತೆ ಇದೆ. ಗಿಲ್, ಜಡೇಜ ಅವರ ಸೇರ್ಪಡೆ ಬಹುತೇಕ ಖಚಿತವಾಗಿದೆ. ಕೀಪರ್ ಸಾಹಾ ಬದಲು ರಿಷಭ್ ಪಂತ್ ಆಡಲೂಬಹುದು. ಅವರು ಸಾಹಾಗಿಂತ ಮೊದಲು ಅಭ್ಯಾಸಕ್ಕೆ ಇಳಿದರು.
ಇದನ್ನೂ ಓದಿ:ಐಪಿಎಲ್ ತಂಡಗಳ ಸಂಖ್ಯೆ; ಇಂದಿನ ಬಿಸಿಸಿಐ ಸಭೆಯಲ್ಲಿ ಇತ್ಯರ್ಥ
ಫಾರ್ಮ್ನಲ್ಲಿಲ್ಲದ ಪೃಥ್ವಿ ಶಾ ಬದಲು ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಶಾ ಅವರಿಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್ ಪಾಠ ಹೇಳಿಕೊಡುತ್ತಿದ್ದುದು ಕಂಡುಬಂತು. ರವೀಂದ್ರ ಜಡೇಜ ಆಗಮಿಸಿದರೆ ತಂಡಕ್ಕೆ ಸಮರ್ಥ ಆಲ್ರೌಂಡರ್ ಓರ್ವ ಲಭಿಸಿದಂತಾಗುತ್ತದೆ.
ಗಾಯಾಳಾಗಿ ಹೊರಬಿದ್ದಿರುವ ಮೊಹಮ್ಮದ್ ಶಮಿ ಸ್ಥಾನಕ್ಕಾಗಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ರೇಸ್ನಲ್ಲಿದ್ದಾರೆ. ಇವರಿಬ್ಬರೂ ರಹಾನೆಗೆ ಬಹಳ ಹೊತ್ತು ಬೌಲಿಂಗ್ ನಡೆಸಿದರು