Advertisement

ಜನ್‌ಧನ್‌ಕ್ಕಾಗಿ ಬ್ಯಾಂಕ್‌ ಎದುರು ಸಾಲು

05:39 PM Apr 08, 2020 | Team Udayavani |

ದಾವಣಗೆರೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನ್‌ಧನ್‌ ಖಾತೆಗೆ ಜಮೆ ಮಾಡಿರುವ 500 ರೂಪಾಯಿ ಬಿಡಿಸಿಕೊಳ್ಳಲು ಮಂಗಳವಾರ ಅನೇಕ ಬ್ಯಾಂಕ್‌ಗಳಲ್ಲಿ ಮಹಿಳೆಯರು ಸಮಸ್ಯೆ ಅನುಭವಿಸಿದರು.

Advertisement

ತಮ್ಮ ಬ್ಯಾಂಕ್‌ ಖಾತೆಗೆ 500 ರೂಪಾಯಿ ಜಮೆ ಮಾಡಲಾಗಿದೆ ಎಂದು ಮೊಬೈಲ್‌ ಗೆ ಸಂದೇಶ ಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಖಾತೆ ಇರುವ ಬ್ಯಾಂಕ್‌ಗಳತ್ತ ದೌಡಾಯಿಸಿದರು. ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ ಒಳಗೊಂಡಂತೆ ಅನೇಕ ಕಡೆ ಬ್ಯಾಂಕ್‌ಗಳ ಮುಂದೆ ಕಿಲೋಮೀಟರ್‌ ಉದ್ದನೆಯ ಸರತಿ ಸಾಲಿನಲ್ಲಿ ಮಹಿಳೆಯರು ಬೆಳಗ್ಗೆಯಿಂದಲೇ ಬಿರು ಬಿಸಿಲನ್ನೂ ಲೆಕ್ಕಿಸದೆ ನಿಂತಿದ್ದರು. ಮೆಸೇಜ್‌ ಬಂದ ದಿನವೇ ಹಣ ಬಿಡಿಸಿಕೊಳ್ಳಬೇಕಂತೆ, ಇಲ್ಲದಿದ್ದರೆ ಹಣ ವಾಪಾಸ್ಸಾಗುತ್ತದೆ… ಎಂಬ ಮಾತುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದಂತೆ ಮಹಿಳೆಯರ ಜಮಾವಣೆ ಹೆಚ್ಚಾಗ ತೊಡಗಿತು. ಬಿನ್ನಿ ಕಂಪನಿ ರಸ್ತೆಯ ಬ್ಯಾಂಕ್‌ ಮುಂದೆ ನೂರಾರು ಮಹಿಳೆಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿಂತಿದ್ದನ್ನು ಕಂಡಂತಹ ಮೇಯರ್‌ ಅಜಯ್‌ ಕುಮಾರ್‌ ಕಾರಿನಿಂದ ಇಳಿದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಕೆಲ ಬ್ಯಾಂಕ್‌ಗಳಲ್ಲಿ ರಕ್ಷಣಾ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಲು ಹರ ಸಾಹಸ ಪಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next