Advertisement

ಬಿಜೆಪಿ ಸಂಸದರೇ ಏನು ಮಾಡಿದ್ದೀರಿ ಲೆಕ್ಕ ಕೊಡಿ: ಖರ್ಗೆ

12:07 PM Apr 11, 2019 | Team Udayavani |

ಕಲಬುರಗಿ: ನಾನು 10 ವರ್ಷ ಸಂಸದನಾಗಿ ಕಲಬುರಗಿಗೆ ಏನು
ಮಾಡಿದ್ದೇನೆ ಎನ್ನುವ ಲೆಕ್ಕ ಕೊಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಗೆದ್ದಿರುವ 18
ಸಂಸದರು ಏನು ಮಾಡಿದ್ದಾರೆ ಎನ್ನುವ ಲೆಕ್ಕ ಕೊಡಲಿ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.

Advertisement

ಅಫಜಲಪುರ ತಾಲೂಕಿನ ಗೊಬ್ಬುರ (ಬಿ), ಭೈರಾಮಡಗಿ, ಅತನೂರ,
ಮಲ್ಲಾಬಾದ್‌ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ
ಅವರು, ತಾವು ಪುನಃ ಗೆದ್ದು ಬಂದರೆ ಸುಳ್ಳು ಹೇಳುವುದು ನಡೆಯುವುದಿಲ್ಲ
ಎಂದು ತಿಳಿದು ಪ್ರಧಾನಿ ನರೇಂದ್ರ ಮೋದಿ ಷಡ್ಯಂತ್ರ ರೂಪಿಸುತ್ತಿದ್ದಾರೆ
ಎಂದು ಆಪಾದಿಸಿದರು.

ಕಲಬುರಗಿ ಜನ 11 ಸಲ ಗೆಲ್ಲಿಸುತ್ತಾ ಬಂದಿದ್ದಾರೆ. ಈಗಲೂ ಗೆಲ್ಲಿಸುತ್ತಾರೆ.
ಜನ ಬೆಂಬಲ ಇರುವವರೆಗೂ ಇಂತಹ ನಾಯಕರ್ಯಾರು ಏನು
ಮಾಡಲಿಕ್ಕಾಗುವುದಿಲ್ಲ. ಪ್ರಧಾನಿ ಮೋದಿ ಕಲಬುರಗಿಗೆ ಏನು ಕೊಟ್ಟಿದ್ದಾರೆಂಬುದನ್ನು ಹೇಳಲಿ ಎಂದರು.

ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ
ನಾಯಕನಾಗಲು ನಾಲ್ಕು ದಶಕಗಳೇ ಹಿಡಿದಿವೆ. ಇಂತಹ ನಾಯಕನನ್ನು
ಗೆಲ್ಲಿಸುವ ಮುಖಾಂತರ ಜಿಲ್ಲೆಯ ಕೀರ್ತಿ ದೇಶಕ್ಕೆ ಪರಿಚಯಿಸಬೇಕೆಂದು
ಕೋರಿದರು. ಮಾಜಿ ಸಂಸದ ಕೆ.ಬಿ. ಶಾಣಪ್ಪ, ಮಾಜಿ ಸಚಿವ ಬಾಬುರಾವ್‌
ಚವ್ಹಾಣ, ಮುಖಂಡರಾದ ರಾಜೇಂದ್ರ ಪಾಟೀಲ ರೇವೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next