Advertisement

ಪರಿಸರ ಅಭಿಯಾನಕ್ಕೆ ಚಾಲನೆ

07:29 PM Jun 08, 2020 | Naveen |

ದಾವಣಗೆರೆ: ವಿಶ್ವ ಪರಿಸರ ದಿನದ ಅಂಗವಾಗಿ ಭಾನುವಾರ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿಯಿಂದ ಬೂದಾಳ್‌ ರಿಂಗ್‌ ರೋಡ್‌ ನಲ್ಲಿ ನಾಳೆಯ ನಾಡನ್ನು ನೆಡೋಣ… ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Advertisement

ಜಿಲ್ಲಾ ಸಂಚಾಲಕ ಸತೀಶ್‌ ಅರವಿಂದ್‌, ಪರಿಸರವು ನಮ್ಮೆಲ್ಲರಿಗೂ ಮುಖ್ಯವಾದ ಭಾಗ. ಪರಿಸರ ಇಲ್ಲದೆ ಮನುಷ್ಯ ಜೀವಿಸಲಾರ. ಈಗಿನ ಕೋವಿಡ್ ಕಾಲದಲ್ಲಿ ನಮ್ಮ ಆರೋಗ್ಯದ ಜೊತೆ ಜೊತೆಗೆ ಪರಿಸರದ ಸಂರಕ್ಷಣೆಯನ್ನು ಸಹ ಮಾಡಬೇಕಾಗಿದೆ ಎಂದು ಮನವಿ ಮಾಡಿದರು. ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಶ್ರಮಿಸಬೇಕಿದೆ. ಅದಕ್ಕಾಗಿಯೇ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿಯಿಂದ ನಾಳೆಯ ನಾಡನ್ನು ನೆಡೋಣ… ಎಂಬ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ . ಗಿಡ ನೆಡುವ ಮೂಲಕ ಪರಿಸರ ಉಳಿಸಿ, ಬೆಳೆಸಬೇಕು ಎಂದು ಹೇಳಿದರು.

ಸಂಘಟನೆಯ ಆದಿಲ್‌ ಖಾನ್‌, ಖಲೀಲ್‌, ಶಿವಕುಮಾರ್‌, ಎಂ. ಜಬೀನಾಖಾನಂ, ಪವಿತ್ರ, ಯಲ್ಲಪ್ಪ, ಪರ್ವೀನ್‌, ಹೀನಾ , ಮಹಬೂಬ್‌ ಬಾಷಾ, ಶೋಯೆಬ್‌, ಅಬ್ದುಲ್‌ಘ ನಿ, ಪಿ. ಕರಿಬಸಪ್ಪ, ರಹಮತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next