Advertisement

ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ

01:16 PM Oct 27, 2021 | Team Udayavani |

ದಾವಣಗೆರೆ: ಆಂಗ್ಲ ಶಾಲೆಯಲ್ಲಿ ಕಲಿತರೆ ಮಕ್ಕಳುದೊಡ್ಡ ಹುದ್ದೆ ಅಲಂಕರಿಸುತ್ತಾರೆಂಬ ಭಾವನೆಅಷ್ಟು ಸರಿಯಲ್ಲ. ಜ್ಞಾನ ಗ್ರಹಿಕೆ ಆಗುವುದೇಮಾತೃಭಾಷೆಯಲ್ಲಿ. ಕನ್ನಡ ನಮಗೆ ಹೃದಯಭಾಷೆಯಾಗಿದ್ದು, ಹತ್ತನೇ ತರಗತಿವರೆಗೆ ಮಕ್ಕಳು ಕನ್ನಡ ಭಾಷೆಯಲ್ಲಿಯೇ ಓದುವುದು ಒಳಿತು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ತಾಲೂಕಿನ ಕಬ್ಬೂರು ಗ್ರಾಮದ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕನ್ನಡಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುರಾರ್ಜಿಕಲಾ ಬಳಗ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಹಾಗೂ 66ನೇ ಕನ್ನಡ ರಾಜ್ಯೋತ್ಸವದಅಂಗವಾಗಿ ಆಯೋಜಿಸಿದ್ದ ಕಬ್ಬೂರು ಸಾಂಸ್ಕೃತಿಕಸಂಭ್ರಮ ಹಾಗೂ “ಕನ್ನಡಕ್ಕಾಗಿ ನಾವುಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಂಗ್ಲ ಶಾಲೆಗೆ ಮಕ್ಕಳನ್ನು ಕಳುಹಿಸುವವ್ಯಾಮೋಹದಿಂದ ಪೋಷಕರು ಹೊರಬರಬೇಕು.ಜಗತ್ತಿನ ದೊಡ್ಡ ಕಂಪನಿಗಳಲ್ಲಿ ಕನ್ನಡದ ಬಾವುಟಹಾರಿಸಿದ ಬಹುತೇಕರು ಕನ್ನಡ ಶಾಲೆಗಳಲ್ಲಿಕಲಿತವರಾಗಿದ್ದಾರೆ ಎಂಬುದನ್ನು ಅರಿಯಬೇಕು.ಮಕ್ಕಳಿಗೆ ವಿದ್ಯೆ ಜೊತೆ ಒಳ್ಳೆಯ ಸಂಸ್ಕಾರ ನೀಡುವಕರ್ತವ್ಯ ಪೋಷಕರದ್ದಾಗಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ನಡುವೆಸಾಮರಸ್ಯ ಬೆಸೆಯುತ್ತವೆ. ಇತ್ತೀಚಿನ ದಿನಗಳಲ್ಲಿಟಿವಿ, ಮೊಬೈಲ್‌ಗ‌ಳು ಜನರನ್ನು ಆಕರ್ಷಣೆಮಾಡುತ್ತಿದ್ದು, ಸಂಸ್ಕೃತಿ, ಜಾನಪದ, ಭಾವಗೀತೆ,ವಚನಗಾಯನಗಳು ಕಣ್ಮರೆಯಾಗುತ್ತಿವೆ.

ಈಕಾರಣದಿಂದ 66ನೇ ಕನ್ನಡ ರಾಜ್ಯೋತ್ಸವಅಂಗವಾಗಿ ರಾಜ್ಯ ಸರ್ಕಾರ ಕನ್ನಡಕ್ಕಾಗಿ ನಾವುಅಭಿಯಾನವನ್ನು ಆಯೋಜಿಸಲಾಗಿದೆ. ಶುದ್ಧವಾಗಿಕನ್ನಡ ಮಾತನಾಡುವವರಿಗೆ ಪ್ರಶಸ್ತಿ ನೀಡಲಾಗುತ್ತಿದೆಎಂದು ತಿಳಿಸಿದರು.ಪತ್ರಕರ್ತ ಮಲ್ಲಿಕಾರ್ಜುನ್‌ ಕಬ್ಬೂರುಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಗಾಯಕರಾದಮುರಾರ್ಜಿ, ಸತೀಶ್‌ಕುಮಾರ್‌ ಜಟ್ಟಿ, ತ್ರಿವೇಣಿ, ಬಿ.ಬಿ.ನಿಂಗಪ್ಪ ಇತರರು ಜಾನಪದ ಗೀತೆ, ವಚನಗೀತೆ‌,ದೇಶಭಕ್ತಿ ಗಾಯನ ನಡೆಸಿಕೊಟ್ಟರು. ಇಲ್ಲಿನ ಸರ್ಕಾರಿಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ನಡೆಸಿಕೊಟ್ಟಸಾಮೂಹಿಕ ನೃತ್ಯ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು.

ಅತ್ತಿಗೆರೆ ಗ್ರಾಪಂ ಅಧ್ಯಕ್ಷೆಯಶೋದಮ್ಮ ಚಂದ್ರಪ್ಪ, ಗ್ರಾಪಂ ಸದಸ್ಯ ಪಿ.ಎಂ.ಶಿವಕುಮಾರ್‌, ಆರ್‌. ಕಲ್ಲೇಶ್‌, ಎನ್‌.ಎಂ. ಕೋಟಿ,ವಿಜಯಮ್ಮ, ಪಾರ್ವತಮ್ಮ, ಎಸ್‌ಡಿಎಂಸಿ ಅಧ್ಯಕ್ಷಶರಣ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next