Advertisement

ಸೌಲಭ್ಯ ಕಲ್ಪಿಸದಿದ್ದರೆ 28ರಂದು ಪ್ರತಿಭಟನೆ: ರಮೇಶ್‌

06:11 PM Aug 25, 2022 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ಒಂದನೇವಾರ್ಡ್‌ ವ್ಯಾಪ್ತಿಯ ಗಾಂಧಿನಗರದ ವಿವಿಧಭಾಗದಲ್ಲಿ ತಕ್ಷಣ ಚರಂಡಿ, ಒಳಚರಂಡಿ,ವಾಚನಾಲಯ ದುರಸ್ತಿ ಕಾಮಗಾರಿಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಆ. 28ರಂದುಮೇಯರ್‌ ಕಚೇರಿಗೆ ಬೀಗ ಹಾಕಿ ಪ್ರತಿಭಟನೆಮಾಡಲಾಗುವುದು ಎಂದು ಕರ್ನಾಟಕ ರಾಜ್ಯಆದಿಜಾಂಬವ ಸಂಘದ ಅಧ್ಯಕ್ಷ ಟಿ. ರಮೇಶ್‌ಎಚ್ಚರಿಕೆ ನೀಡಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಗಾಂಧಿನಗರದಲ್ಲಿಒಂದರೆಡು ದಿನಗಳಲ್ಲಿ ಕಾಮಗಾರಿಪ್ರಾರಂಭಿಸಬೇಕು. ಇಲ್ಲವಾದಲ್ಲಿ ವಾರ್ಡ್‌ಸದಸ್ಯ ಜೆ.ಡಿ. ಪ್ರಕಾಶ್‌ ಅವರೊಂದಿಗೆಮೇಯರ್‌ ಕಚೇರಿಗೆ ಬೀಗ ಹಾಕಿ ಪ್ರತಿಭಟನೆನಡೆಸಲಾಗುವುದು. ನಮ್ಮನ್ನು ಬಂಧನಕ್ಕೆಒಳಪಡಿಸಿದರೂ ಹೋರಾಟ ನಡೆಸುತ್ತೇವೆ ಎಂದರು.

ಗಾಂಧಿನಗರದ ವಿವಿಧ ಭಾಗದಲ್ಲಿ ಚರಂಡಿ,ಒಳಚರಂಡಿ ತುಂಬಿ ತುಳುತ್ತಿವೆ. ವಾರ್ಡ್‌ಸದಸ್ಯರು ಪ್ರತಿ ದಿನ ಬೆಳಗ್ಗೆ ಭೇಟಿ ನೀಡಿಸ್ವತ್ಛತಾ ಕೆಲಸ ಮಾಡಿಸುತ್ತಾರೆ. ಒಂದರೆಡುದಿನಗಳಲ್ಲಿ ಮತ್ತೆ ಚರಂಡಿ, ಒಳಚರಂಡಿ ತುಂಬಿಹರಿಯುತ್ತವೆ. ಬಹಳ ಹಳೆಯ ಚರಂಡಿ,ಒಳಚರಂಡಿ ಬದಲಿಗೆ ಹೊಸ ಚರಂಡಿ,ಒಳಚರಂಡಿ ವ್ಯವಸ್ಥೆ ಆಗಬೇಕು. ನಮ್ಮಸದಸ್ಯರು ಅನುದಾನಕ್ಕೆ ಹಲವಾರು ಬಾರಿಮನವಿ ಸಲ್ಲಿಸಿದ್ದಾರೆ. ಸಾಮಾನ್ಯ ಸಭೆಯಲ್ಲೂಪ್ರಸ್ತಾಪ ಮಾಡಿದ್ದರೂ ಮೇಯರ್‌ಸ್ಪಂದಿಸುತ್ತಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next