Advertisement

ಎಂಎಸ್‌ಪಿಗೆ ಕಾಯ್ದೆ ಮಾನ್ಯತೆ ನೀಡಲು ಒತ್ತಾಯ

02:49 PM Oct 12, 2021 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಕನಿಷ್ಠ ಬೆಂಬಲಬೆಲೆ ಯೋಜನೆಗೆ ಕಾಯ್ದೆ ರೂಪಿಸಬೇಕುಮತ್ತು ಕ್ವಿಂಟಲ್‌ ಮೆಕ್ಕೆಜೋಳಕ್ಕೆ 3,500ರೂಪಾಯಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿಮಂಜುನಾಥ್‌ ಬಣ) ಕಾರ್ಯಕರ್ತರು ಪ್ರತಿಭಟನೆ,ಬೈಕ್‌ ರ್ಯಾಲಿ ನಡೆಸಿದರು.

Advertisement

ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯೋಜನೆಯಡಿ ಕೃಷಿ ಉತ್ಪನ್ನಗಳಿಗೆ ಬೆಲೆನಿಗದಿ ಮಾಡುತ್ತದೆ. ಆದರೆ, ಕನಿಷ್ಠ ಬೆಂಬಲಬೆಲೆ ಯೋಜನೆಗೆ ಕಾನೂನಿನ ಮಾನ್ಯತೆಇಲ್ಲದೇ ಇರುವುದರಿಂದ ಕನಿಷ್ಠ ಬೆಂಬಲ ಬೆಲೆಯೋಜನೆಗೆ ಬೆಲೆಯೇ ಇಲ್ಲದಂತಾಗುತ್ತದೆ.ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿದಧಾರಣೆಗಿಂತ ಲೂ ಕಡಿಮೆ ದರಕ್ಕೆ ಬೆಳೆಗಳಖರೀದಿಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ಕೂಡಲೇಕನಿಷ್ಠ ಬೆಂಬಲ ಬೆಲೆ ಯೋಜನೆ ಕಾಯ್ದೆ ರೂಪನೀಡಬೇಕು ಎಂದು ಪ್ರತಿಭಟನಾ ನಿರತ ರೈತರು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕ್ವಿಂಟಲ್‌ಮೆಕ್ಕೆ ಜೋಳಕ್ಕೆ1860ರೂಪಾಯಿ ನಿಗದಿಪಡಿಸಿದೆ. ಆದರೆ, ಅದರಂತೆಯಾವ ವರ್ತಕರು ಖರೀದಿ ಮಾಡುವುದೇಇಲ್ಲ. 1200-1400 ರೂಪಾಯಿಯಂತೆ ಖರೀದಿಮಾಡುತ್ತಾರೆ. ರೈತರಿಗೆ ಪ್ರತಿ ಕ್ವಿಂಟಲ್‌ಗೆ 460-660 ರೂಪಾಯಿ ನಷ್ಟವಾಗುತ್ತದೆ.
ಕನಿಷ್ಠ ಬೆಂಬಲಬೆಲೆ ಯೋಜನೆಗೆ ಕಾಯ್ದೆ ರೂಪ ನೀಡಿದರೆನಿಗದಿತ ದರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಮಾಡಲಿಕ್ಕೆ ಬರುವುದೇ ಇಲ್ಲ. ಒಂದೊಮ್ಮೆಕಡಿಮೆ ಬೆಲೆಗೆ ಖರೀದಿ ಮಾಡಿದವರಿಗೆ ಲೈಸೆನ್ಸ್‌ರದ್ಧು, 1 ವರ್ಷ ಜೈಲು, ದಂಡದಂತಹ ಉಗ್ರಕ್ರಮ ತೆಗೆದುಕೊಳ್ಳುವ ಅವಕಾಶ ಮಾಡಿಕೊಟ್ಟಲ್ಲಿ ಎಲ್ಲ ರೈತರಿಗೆ ಅನುಕೂಲ ಆಗುತ್ತದೆ.

ಕನಿಷ್ಠಬೆಂಬಲ ಬೆಲೆ ಯೋಜನೆಗೂ ಒಂದು ಮಾನ್ಯತೆದೊರೆಯುತ್ತದೆ. ಹಾಗಾಗಿ ಸರ್ಕಾರ ಕೂಡಲೇ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾಯ್ದೆ ರೂಪನೀಡುವಮೂಲಕರೈತರ10 ತಿಂಗಳಹೋರಾಟಕ್ಕೆಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾಯ್ದೆರೂಪ ನೀಡಿದಲ್ಲಿ ದೇಶದ್ಯಾಂತ ಮೆಕ್ಕೆಜೋಳಕ್ಕೆಒಂದೇ ಧಾರಣೆ ಇರುತ್ತದೆ.

Advertisement

ಇಲ್ಲದೇ ಹೋದಲ್ಲಿದಾವಣಗೆರೆಯಲ್ಲಿ ಬೆಲೆ ಜಾಸ್ತಿ ಇದ್ದರೆ ಬಿಹಾರಮುಂತಾದ ಕಡೆಯಿಂದ ಮೆಕ್ಕೆಜೋಳವನ್ನಕಡಿಮೆ ದರಕ್ಕೆ ಖರೀದಿಸಿ ತಂದು, ಇಲ್ಲಿ ಮಾರಾಟಮಾಡಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆಯೋಜನೆಗೆ ಕಾಯ್ದೆ ರೂಪ ನೀಡುವುದು ಎಲ್ಲಕಡೆಯಿಂದ ಉತ್ತಮ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next