Advertisement

“ಕಪ್ಪು ನೆಲದ ಕೆಂಪುಗಾಥೆ’ಬಿಡುಗಡೆ

07:57 PM May 14, 2022 | Team Udayavani |

ದಾವಣಗೆರೆ: ಹುಸೇನ್‌ ಬ್ರದರ್ಸ್‌ಮತ್ತು ಸಹನಾ ಪ್ರಕಾಶನ ವತಿಯಿಂದ ಇಮಿ¤ಯಾಜ್‌ ಹುಸೇನ್‌ ಅವರ “ಕಪ್ಪುನೆಲದ ಕೆಂಪುಗಾಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮೇ 15ರಂದು ಬೆಳಿಗ್ಗೆ 11.30ಕ್ಕೆ ನಗರದ ರೋಟರಿಬಾಲಭವನದಲ್ಲಿ ಏರ್ಪಡಿಸಲಾಗಿದೆಎಂದು ಕೃತಿಕಾರ ಇಮಿ¤ಯಾಜ್‌ಹುಸೇನ್‌ ತಿಳಿಸಿದರು.ನಗರದಲ್ಲಿ ಶುಕ್ರವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಮಾಜಿ ಸಭಾಧ್ಯಕ್ಷ,ಶಾಸಕ ಕೆ.ಆರ್‌. ರಮೇಶಕುಮಾರ್‌ಪುಸ್ತಕ ಬಿಡುಗಡೆ ಮಾಡುವರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಸಹಪ್ರಾಧ್ಯಾಪಕ ಡಾ|ದಾದಾಪೀರ್‌ನವಿಲೇಹಾಳ್‌ ಅಧ್ಯಕ್ಷತೆ ವಹಿಸುವರು.ಪುಸ್ತಕ ಕುರಿತು ಚಿಂತಕ ಬಿ.ಪೀರ್‌ಬಾಷಾಮಾತನಾಡುವರು ಎಂದರು.

Advertisement

ಮುಖ್ಯ ಅತಿಥಿಗಳಾಗಿಎ.ಐ.ಟಿ.ಯು.ಸಿ. ರಾಜ್ಯ ಅಧ್ಯಕ್ಷ ಎಚ್‌.ವಿ.ಅನಂತ ಸುಬ್ಬರಾವ್‌, ಸಂಪಾದಕಡಾ|ಸಿದ್ಧನಗೌಡ ಪಾಟೀಲ್‌, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕಿಕೌಸರ್‌ ರೇಷ್ಮಾ, ಹಿರಿಯ ಪತ್ರಕರ್ತಬಿ.ಎನ್‌.ಮಲ್ಲೇಶ್‌, ಚಿಂತಕಪ್ರೊ.ಸಿ.ಕೆ. ಮಹೇಶ್‌, ದೊಣ್ಣೆ ಹಳ್ಳಿಗುರುಮೂರ್ತಿ ಭಾಗವಹಿಸುವರು.ಇದೇ ವೇಳೆ ಬಾಪೂಜಿ ವಿದ್ಯಾ ಸಂಸ್ಥೆಯನಿಕಟಪೂರ್ವ ನಿರ್ದೇಶಕ ಕೆ. ಇಮಾಮ್‌ಅವರನ್ನು ಸನ್ಮಾನಿಸಲಾಗುವುದು ಎಂದುತಿಳಿಸಿದರು.ಪತ್ರಕರ್ತ ಬಿ.ಎನ್‌.ಮಲ್ಲೇಶ್‌,.ದಾದಾಪೀರ್‌ ನವಿಲೇಹಾಳ್‌,ಜೆ. ಕಲೀಂಭಾಷಾ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next