Advertisement

ಮೌಖೀಕ ಭಾಷೆಯಲ್ಲಿ ಶುದ್ದತೆ ಕಲ್ಪನೆಯೇ ಅಪ್ರಸ್ತುತ

03:00 PM Dec 26, 2021 | Team Udayavani |

ದಾವಣಗೆರೆ:ಮೌಖೀಕ ಭಾಷೆಯಲ್ಲಿ ಶುದ್ಧಾಶುದ್ಧತೆಯಕಲ್ಪನೆಯೇ ಅಶುದ್ಧ ಅಥವಾ ಅಪ್ರಸ್ತುತ ಎಂದುಖ್ಯಾತ ಸಾಹಿತಿ, ಸಾಂಸ್ಕೃತಿಕ ಚಿಂತಕ ಬರಗೂರುರಾಮಚಂದ್ರಪ್ಪ ಹೇಳಿದರು.ಇಲ್ಲಿಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರನಡೆದ ಸಮಾರಂಭದಲ್ಲಿ ಜಾನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪ ಅವರ “ನಿಜದಿಂ ಕುರಿತೋದದೆಯುಂ'(ಗ್ರಾಮೀಣ ಸಂಸ್ಕೃತಿ ಸಂದರ್ಭ ಕೋಶ) ಕೃತಿಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಶುದ್ಧತೆನಿರೀಕ್ಷಿಸುವಂತಿಲ್ಲ. ಮೌಖೀಕ ಭಾಷೆಯಲ್ಲಿ ಜನಬಳಕೆಯೇ ಪ್ರಮುಖ ಮಾನದಂಡವಾಗಿದೆ. ಭಾಷೆಯಾವಾಗಲೂ ಜನಬಳಕೆಯ ಪರೀಕ್ಷೆಯಲ್ಲಿಯೇಪಾಸಾಗಬೇಕು. ಆದ್ದರಿಂದ ಭಾಷಾ ಶುದ್ಧತೆ ಬಗ್ಗೆಮಾತನಾಡುವವರು ಲಿಖೀತ ಹಾಗೂ ಮೌಖೀÂಕಭಾಷೆಯ ವ್ಯತ್ಯಾಸ ಅರ್ಥ ಮಾಡಿಕೊಳ್ಳಬೇಕುಎಂದರು.

ಲಿಖೀತಭಾಷೆಹಾಗೂ ಮೌಖೀÂಕಭಾಷೆಯಲ್ಲಿಬಹಳ ವ್ಯತ್ಯಾಸವಿದೆ. ಲಿಖೀತ ಭಾಷೆಯಲ್ಲಿ ವ್ಯಾಕರಣ, ವಾಕ್ಯರಚನೆ ನಿರೀಕ್ಷಿಸುವುದು ಸರಿ. ಅದರಲ್ಲಿಯೂ ಪ್ರಬಂಧ,ಲೇಖನಗಳಲ್ಲಿ ಭಾಷಾ ಶುದ್ಧತೆ ಬೇಕೇ ಬೇಕು. ಆದರೆಲಿಖೀತ ಭಾಷೆಯ ಸೃಜನಶೀಲ ಬರಹಗಳಲ್ಲಿಯೂಭಾಷಾ ಶುದ್ಧತೆ ನಿರೀಕ್ಷಿಸುವುದು ಸರಿಯಲ್ಲ ಎಂದರು.ಸಮಾಜದಲ್ಲಿ ಸಂಪ್ರದಾಯ ಹಾಗೂ ಆಧುನಿಕತೆಒಟ್ಟೊಟ್ಟಿಗೆ ಹೋಗುತ್ತವೆ. ಆಧುನಿಕತೆ ನಿರಂತರಚಲನಶೀಲತೆ ಇರುವ ಕ್ರಿಯೆ. ಯಾವುದೇಸಂಸ್ಕೃತಿ ವರ್ತಮಾನ, ಭೂತಕಾಲವನ್ನು ಒಟ್ಟಿಗೆಹಿಡಿದಿಟ್ಟುಕೊಂಡರೆ ಅದು ವಾಸ್ತವಿಕತೆಗೆಹತ್ತಿರವಾಗುತ್ತದೆ. ಹೀಗಾಗಿ ಒಂದು ಸಂಸ್ಕೃತಿ ಅರ್ಥಮಾಡಿಕೊಳ್ಳಬೇಕಾದರೆ ಭೂತಕಾಲ, ವರ್ತಮಾನಹಾಗೂ ಭವಿಷ್ಯ ಕಾಲ ಈ ತ್ರಿಕಾಲಗಳ ಜ್ಞಾನ ಅವಶ್ಯ ಎಂದರು.

ನಮ್ಮದು ಬಹುತ್ವ ಸಂಸ್ಕೃತಿ: ಭಾರತ ಹಾಗೂಗ್ರಾಮ ಭಾರತ ಎರಡಲ್ಲಿಯೂ ಬಹುತ್ವವುಳ್ಳ ಸಂಸ್ಕೃತಿಇದೆ. ದೇಶದಲ್ಲಿ 24ಕೋಟಿ ಕುಟುಂಬಗಳಿದ್ದುಇವುಗಳಲ್ಲಿ 17.9 ಕೋಟಿ ಕುಟುಂಬಗಳು ಗ್ರಾಮೀಣಪ್ರದೇಶದಲ್ಲಿಯೇ ಇವೆ. ಹಾಗಾಗಿ ದೇಶದಲ್ಲಿ ಗ್ರಾಮಭಾರತವೇ ದೊಡ್ಡದಾಗಿದೆ. ಗ್ರಾಮಗಳು ಅರೆಪಟ್ಟಣಗಳಾಗಿ, ಪಟ್ಟಣಗಳು ಅರೆ ನಗರಗಳಾಗಿ ಹಾಗೂನಗರಗಳು ಮಿಶ್ರ ಸಂಸ್ಕೃತಿಯ ಕೇಂದ್ರಗಳಾಗಿರುವಇಂದಿನ ಸಂಕ್ರಮಣ ವ್ಯವಸ್ಥೆಯಲ್ಲಿ ಭಾಷೆಯಪದಗಳ ಅರ್ಥವೂ ಸಂದರ್ಭಕ್ಕನುಗುಣವಾಗಿಪಲ್ಲಟವಾಗುತ್ತದೆ.

ಗ್ರಾಮೀಣ ಸಂಸ್ಕೃತಿಯಲ್ಲಿಆಯಾ ಸಂದರ್ಭಗಳಲ್ಲಿ ಬಳಸಿದ ಭಾಷೆಯಅರ್ಥ ತಿಳಿದು ದಾಖಲಿಸಿದರೆ ಅದು ಮುಂದಿನಪೀಳಿಗೆಗೆ ಅನುಕೂಲವಾಗುತ್ತದೆ ಎಂದರು. “ನಿಜದಿಂಕುರಿತೋದದೆಯುಂ’ ಕೃತಿ ಕುರಿತು ಕನ್ನಡ ಪ್ರಾಧ್ಯಾಪಕಡಾ| ದಾದಾಪೀರ್‌ ನವಿಲೇಹಾಳ್‌ ಹಾಗೂ ಹಿರಿಯಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸಡಾ| ಎಂ.ಜಿ. ಈಶ್ವರಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷಡಾ| ಮಂಜುನಾಥ ಕುರ್ಕಿ ವೇದಿಕೆಯಲ್ಲಿ¨ರ ‌ª ು.

Advertisement
Advertisement

Udayavani is now on Telegram. Click here to join our channel and stay updated with the latest news.

Next