Advertisement

ವೋಟ್‌ ಮಾಡಲು ಎತ್ತಿನಗಾಡಿಯಲ್ಲಿ ಬಂದರು!

07:23 PM Dec 11, 2021 | Team Udayavani |

ದಾವಣಗೆರೆ: ಸ್ಥಳೀಯ ಸಂಸ್ಥೆಗಳಿಂದವಿಧಾನ ಪರಿಷತ್ತುಗೆ ಶುಕ್ರವಾರನಡೆದ ಚುನಾವಣೆಯಲ್ಲಿ ಚನ್ನಗಿರಿತಾಲೂಕಿನ ಸಂತೇಬೆನ್ನೂರು ಗ್ರಾಮಪಂಚಾಯತ್‌ನ ಕಾಂಗ್ರೆಸ್‌ ಸದಸ್ಯರುಮತಗಟ್ಟೆಗೆ ಎತ್ತಿನಗಾಡಿ ಮೂಲಕಬಂದು ಮತ ಚಲಾಯಿಸುವಮೂಲಕ ಗಮನ ಸೆಳೆದರು.

Advertisement

ಕಾಂಗ್ರೆಸ್‌ ಸದಸ್ಯರು ಎತ್ತಿನಗಾಡಿಮೂಲಕ ಮತಗಟ್ಟೆಗೆ ಆಗಮಿಸುವಮೂಲಕ ಕೇಂದ್ರ ಸರ್ಕಾರದಬೆಲೆ ಏರಿಕೆ ನೀತಿ ಖಂಡಿಸಿದರು.

ದೇಶದಲ್ಲಿ ಪ್ರತಿಯೊಂದರ ಬೆಲೆಹೆಚ್ಚಾಗಿರುವುದರಿಂದ ಜನರುಜೀವನ ನಡೆಸುವುದು ತುಂಬಾಕಷ್ಟವಾಗುತ್ತಿದೆ. ಕೇಂದ್ರ, ರಾಜ್ಯಸರ್ಕಾರದ ಬೆಲೆ ಏರಿಕೆ ತಡೆಗಟ್ಟುವಲ್ಲಿಸಂಪೂರ್ಣ ವಿಫಲವಾಗಿರುವುದವಿರೋಧಿಸಿ ಮತ್ತು ಪೆಟ್ರೋಲ್‌,ಡೀಸೆಲ್‌ ಬೆಲೆ ಹೆಚ್ಚಳದಿಂದ ಜನರುಬೈಕ್‌, ಇತರೆ ವಾಹನಗಳ ಬದಲಿಗೆಎತ್ತಿನ ಗಾಡಿ ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದರ ಸಂಕೇತವಾಗಿ ಎತ್ತಿನಗಾಡಿಯಲ್ಲಿಬಂದು ಮತ ಚಲಾಯಿಸುತ್ತಿದ್ದೇವೆ ಎಂದು ತಿಳಿಸಿದರು.

ಸದಸ್ಯರಾದಆಸೀಫ್‌, ಶಿವರಾಜ್‌, ರುದ್ರೇಶ್‌,ಕೃಷ್ಣಮೂರ್ತಿ, ಬಾಲು, ಕೊಬ್ಬರಿಸಿದ್ದೇಶ್‌, ರಹಮತ್‌ ವುಲ್ಲಾಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next