Advertisement

ಸೋಂಕು ನಿವಾರಕ ಮಾರ್ಗ

04:50 PM Apr 10, 2020 | Naveen |

ದಾವಣಗೆರೆ: ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ ಕೊರೊನಾ ವೈರಸ್‌ ತಡೆಗೆ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರದೊಂದಿಗೆ ಮಹಾನಗರ ಪಾಲಿಕೆಯಿಂದ ತರಕಾರಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಮಾರ್ಗ ಸಿದ್ಧ ಪಡಿಸಲಾಗಿದೆ.

Advertisement

ಕೋವಿಡ್  ವೈರಸ್‌ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪದೆ ಪದೇ ಕೈ ತೊಳೆಯುವುದು… ಅತೀ ಮುಖ್ಯ. ಪ್ರತಿ ನಿತ್ಯ ಮಾರುಕಟ್ಟೆಗೆ ಬರುವರಿಂದ ಸಾಮಾಜಿಕ ಅಂತರ ನಿರೀಕ್ಷೆ ಮಾಡ ಬಹುದು. ಆದರೆ, ಕೈ ತೊಳೆಯುವುದನ್ನ ನಿರೀಕ್ಷೆ ಮಾಡುವಂತಿಲ್ಲ. ಹಾಗಾಗಿಯೇ ಪ್ರತಿ ದಿನ ತರಕಾರಿ ಮಾರುಕಟ್ಟೆಗೆ ಬರುವಂತಹ ನೂರಾರು ರೈತರು, ವರ್ತಕರ ಅನುಕೂಲಕ್ಕಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಡಿ 40-45 ಸಾವಿರ ರೂಪಾಯಿ ವೆಚ್ಚದಲ್ಲಿ ಸೋಂಕು ನಿವಾರಕ ಮಾರ್ಗ ಸಿದ್ಧಪಡಿಸಲಾಗಿದೆ. ಒಂದರೆಡು ದಿನಗಳಲ್ಲಿ ಉದ್ಘಾಟನೆ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next