Advertisement

ದಾವಣಗೆರೆ ಜಿಲ್ಲೆಯಲ್ಲಿ 203 ಮಂಜು ಗುಣಮುಖ : 535 ಹೊಸ ಪ್ರಕರಣ ಪತ್ತೆ

09:21 PM Jun 02, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದ ಗುಣಮುಖರಾದ 203 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ದಾವಣಗೆರೆ ತಾಲೂಕಿನಲ್ಲಿ 85, ಹರಿಹರ ದಲ್ಲಿ 24, ಜಗಳೂರಿನಲ್ಲಿ 18, ಚನ್ನಗಿರಿಯಲ್ಲಿ 34, ಹೊನ್ನಾಳಿಯಲ್ಲಿ 38, ಹೊರ ಜಿಲ್ಲೆಯ ನಾಲ್ವರು ಸೇರಿ 208 ಜನರು ಗುಣಮುಖರಾಗಿದ್ದಾರೆ.

Advertisement

ಜಿಲ್ಲೆಯಲ್ಲಿ 535 ಜನರಲ್ಲಿ ಸೋಂಕು ದೃಢಪಟ್ಟಿದೆ. ದಾವಣಗೆರೆಯಲ್ಲಿ 266, ಹರಿಹರ 72, ಜಗಳೂರಿನಲ್ಲಿ 44, ಚನ್ನಗಿರಿಯಲ್ಲಿ 83, ಹೊನ್ನಾಳಿಯಲ್ಲಿ 58, ಹೊರ ಜಿಲ್ಲೆಯ 12 ಜನರು ಒಳಗೊಂಡಂತೆ 535 ಜನರು ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾದಿಂದ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ :ವಿದೇಶಕ್ಕೆ ಹೋಗುವ ಕನ್ನಡಿಗರಿಗೆ ವ್ಯಾಕ್ಸಿನ್ ವ್ಯವಸ್ಥೆ : ಎಲ್ಲವೂ ಅಚ್ಚುಕಟ್ಟು, ನಿರಾತಂಕ

ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದ 55 ವರ್ಷದ ವೃದ್ದೆ, ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ 26 ವರ್ಷದ ವ್ಯಕ್ತಿ, ಮಲ್ಲನಾಯನಹಳ್ಳಿಯ 60 ವರ್ಷದ ವೃದ್ಧೆ, ದಾವಣಗೆರೆಯ ಭಾರತ್ ಕಾಲೋನಿಯ 31 ವರ್ಷದ ವ್ಯಕ್ತಿ, ಬಟ್ಟಲಕಟ್ಟೆ ಗ್ರಾಮದ 55 ವರ್ಷದ ವ್ಯಕ್ತಿ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ 366 ಜನರು ಮೃತಪಟ್ಟಿದ್ದಾರೆ. 4378 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next