Advertisement

Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು

09:23 AM Sep 18, 2024 | Team Udayavani |

ದಾವಣಗೆರೆ: ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಷರ್ಟ್ ಮೇಲೆ ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡಿದ್ದವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸೆ.16 ರಂದು ದಾವಣಗೆರೆ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಮೆರವಣಿಗೆ ನಡೆಸುತ್ತಿದ್ದು. ಹಳೆ ಪಿಬಿ ರಸ್ತೆ ಗಾಂಧಿ ಸರ್ಕಲ್ ಬಳಿ ಸಂಜೆ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕ ನೆಮ್ಮದಿ ಕದಡುವ, ವಿವಿಧ ಧರ್ಮ ಗುಂಪುಗಳು ಅಥವಾ ಕೋಮುಗಳ ನಡುವೆ ಸೌಹಾರ್ದಕ್ಕೆ ಬಾಧಕವಾಗುವ ಕೃತ್ಯವನ್ನು ಮಾಡುವ ಉದ್ದೇಶದಿಂದ ಇತರರೊಡನೆ ಸೇರಿಕೊಂಡು ತನ್ನ ಷರ್ಟ್ ಮೇಲೆ ಪ್ಯಾಲೇಸ್ತೇನ್ ದೇಶದ ಬಾವುಟದ ಸ್ಟಿಕ್ಕರ್ ನ್ನು ಹಾಕಿಕೊಂಡು ಧರ್ಮ, ಜಾತಿ ಆಧಾರದ ಮೇಲೆ ಸೌಹಾರ್ದತೆಯನ್ನು ಹಾಳು ಮಾಡಿ ಜಾತಿ ಅಥವಾ ಕೋಮುಗಳ ನಡುವೆ ದ್ವೇಷ.

ವೈರತ್ವ ಭಾವನೆಗಳನ್ನು ಉಂಟುಮಾಡಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಸಾಧ್ಯತೆ ಇರುವುದರಿಂದ. ಸ್ಟಿಕ್ಕರ್ ಹಚ್ಚಿ ಕೊಂಡಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಾಜ್ ಎಂಬುವರ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆ ಗುನ್ನೆ ನಂ 149/2024 ಕಲಂ 196(1)(ಬಿ), 196(2),61(2),3(5) ಬಿ.ಎನ್.ಎಸ್-2023, ರೀತ್ಯಾ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next