Advertisement

Davanagere: ಅನ್ಯಕೋಮಿನ ಯುವತಿ ಜತೆಗಿದ್ದಾತನಿಗೆ ಹಲ್ಲೆ

11:10 PM Dec 11, 2023 | Team Udayavani |

ದಾವಣಗೆರೆ: ತಮ್ಮ ಕೋಮಿನ ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿದ ಕೆಲವರು ಬೈಕ್‌ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

Advertisement

ಮತ್ತೊಂದೆಡೆ ಬೈಕ್‌ ಸವಾರನ ವಿರುದ್ಧ ಮಹಿಳಾ ಠಾಣೆಯಲ್ಲಿ ಪೋಕೊÕà ಪ್ರಕರಣ ದಾಖಲಾಗಿದೆ.
ಜಾಲಿನಗರದ 30 ವರ್ಷದ ಶ್ರೀನಿವಾಸ್‌ ಡಿ.8ರಂದು ನೆರೆಮನೆಯ ಅನ್ಯಕೋಮಿನ ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಕೆಲವರು ಆತನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ಅಲ್ಲದೆ ಕೆಲವು ಮಾತ್ರೆಗಳನ್ನೂ ನುಂಗಿಸಿದ್ದಾರೆ.

ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವಕ ಸತ್ತು ಹೋಗಿದ್ದಾನೆ ಎಂದು ಭಾವಿಸಿ ಶಾಮನೂರು ಸಮೀಪ ಬಿಸಾಡಿ ಹೋಗಿದ್ದಾರೆ. ಯುವಕನ ಜತೆಗಿದ್ದ ಬಾಲಕಿಯನ್ನು ಹಲ್ಲೆ ಮಾಡಿದವರೇ ಅಪಹರಿಸಿ ಯುವಕನ ವಿರುದ್ಧ ಪೋಕೊÕà ಪ್ರಕರಣ ದಾಖಲಿಸಿದ್ದಾರೆ. ನೈತಿಕ ಪೊಲೀಸ್‌ಗಿರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳ
ಬೇಕೆಂದು ಹಿಂದೂಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next