Advertisement

Davanagere; ಮನೆಯಲ್ಲಿ ಸ್ಫೋಟ; ಗಂಭೀರವಾಗಿ ಗಾಯಗೊಂಡ ವಯೋವೃದ್ಧೆ

03:03 PM Nov 23, 2023 | Team Udayavani |

ದಾವಣಗೆರೆ; ಸ್ಫೋಟದ ಪರಿಣಾಮ ವಿಕಲ ಚೇತನ ವಯೋವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ವಿನೋಬ ನಗರದ ಒಂದನೇ ಮುಖ್ಯ ರಸ್ತೆಯಲ್ಲಿ ನಡೆದಿದೆ.

Advertisement

ಸ್ಮಿತಾ ಎಂಬ ವಯೋವೃದ್ದೆ ಗಂಭೀರವಾಗಿ ಗಾಯಗೊಂಡವರು. ವಿನೋಬ ನಗರದ ಒಂದನೇ ಮುಖ್ಯ ರಸ್ತೆಯ 17 ನೇ ಕ್ರಾಸ್ ನ ಮಾಚಿದೇವ ಸಮುದಾಯ ಭವನ ಸಮೀಪ ಸ್ಮಿತಾ ತಮ್ಮ ಮಗನ ಜೊತೆ ವಾಸವಿದ್ದರು.

ಮಧ್ಯಾಹ್ನದ ವೇಳೆ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಫೋಟದಿಂದ ಸ್ಮಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಸ್ಮಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಖ, ತಲೆಭಾಗದಲ್ಲಿ ಬಹಳಷ್ಟು ಗಾಯಗಳಾಗಿವೆ.‌ ದುರಂತ ಸಂಭವಿಸಿದ ಸಂದರ್ಭದಲ್ಲಿ ಮಗ ಮನೆಯಲ್ಲಿ ಇರಲಿಲ್ಲ.

ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಕ್ಕರ್ ಸ್ಫೋಟಗೊಂಡಿರಬಹುದು ಎನ್ನಲಾಗುತ್ತಿದೆ. ಒತ್ತಡದಿಂದ ಸಿಲಿಂಡರ್ ಸ್ಫೋಟ ಆಗಿರಬಹುದು ಎನ್ನಲಾಗುತ್ತಿದೆ. ತನಿಖೆ ನಂತರವೇ ನಿಖರ ಕಾರಣ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next