Advertisement

ನಮ್ಮ ಬೇಡಿಕೆ ಈಡೇರಿಸಿ

10:11 AM Jul 06, 2019 | Naveen |

ದಾವಣಗೆರೆ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೋವಾ ಮಾದರಿ ಸೇವಾ ಅವಧಿ ಆಧಾರದಲ್ಲಿ ಗೌರವ ಧನ ಒಳಗೊಂಡಂತೆ ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌(ಎಐಟಿಯುಸಿ) ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅಹೋರಾತ್ರಿ ಧರಣಿ ಪ್ರಾರಂಭಿಸಿದರು.

Advertisement

ರಾಜ್ಯದಲ್ಲಿರುವ 65,911 ಅಂಗನವಾಡಿ, 3,331 ಮಿನಿ ಅಂಗನವಾಡಿ ಕೇಂದ್ರಗಳನ್ನೇ ಕಿಂಡರ್‌ ಗಾರ್ಡನ್‌ಗಳಾಗಿ ಮಾರ್ಪಡಿಸಿ, ಇಂಗ್ಲಿಷ್‌ ಕಾನ್ವೆಂಟ್, ನರ್ಸರಿ ಸ್ಕೂಲ್ಗಳನ್ನಾಗಿ ಪರಿವರ್ತಿಸಿ, 2.6 ವರ್ಷದ ಮಕ್ಕಳನ್ನು ಅಂಗನವಾಡಿ ನರ್ಸರಿಗಳಿಗೆ ಸೇರಿಸಿಕೊಳ್ಳಲು ಸರ್ಕಾರ ಆದೇಶ ಮಾಡಬೇಕು. ಇಂಗ್ಲಿಷ್‌ ಬೋಧನೆಗೆ ಅಗತ್ಯ ಪುಸ್ತಕ, ಮಕ್ಕಳಿಗೆ ಸಮವಸ್ತ್ರ, ಶೂ ಇತರೆ ಅಗತ್ಯ ಸೌಲಭ್ಯ ಒದಗಿಸಬೇಕು. ಅಂಗನವಾಡಿ ನರ್ಸರಿಯಲ್ಲಿ ಕಲಿತವರನ್ನ ಪ್ರಾಥಮಿಕ ಶಾಲೆಗೆ ಸೇರಿಸುವ ಆದೇಶವನ್ನೂ ಸರ್ಕಾರ ನೀಡುವ ಮೂಲಕ ಅಂಗನವಾಡಿ ಕೇಂದ್ರಗಳ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಕಾರ್ಯಕರ್ತೆಯರಿಗೆ 50, ಸಹಾಯಕಿಯರಿಗೆ 30 ಸಾವಿರ ಎನ್‌ಪಿಎಸ್‌ ಹಣ ನೀಡಬೇಕು. ಗೋವಾ ಮಾದರಿ ಸೇವಾ ಅವಧಿ ಆಧಾರದಲ್ಲಿ ಗೌರವ ಧನ, ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ 60 ವರ್ಷಕ್ಕೆ ನಿವೃತ್ತರಾದ ಕಾರ್ಯಕರ್ತೆಯರು, ಸಹಾಯಕಿಯರಿಗೆ 6 ಸಾವಿರ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಫೆಡರೇಷನ್‌ ರಾಜ್ಯ ಸಂಚಾಲಕ ಆವರಗೆರೆ ಚಂದ್ರು, ಖಜಾಂಚಿ ಎಂ.ಬಿ. ಶಾರದಮ್ಮ, ಐರಣಿ ಚಂದ್ರು, ಎಸ್‌.ಎಸ್‌. ಮಲ್ಲಮ್ಮ, ವಿಶಾಲಾಕ್ಷಿ ಮೃತ್ಯುಂಜಯ, ರೇಣುಕಮ್ಮ, ಎಚ್.ಎಸ್‌. ನೀಲಮ್ಮ, ಪಿ.ಬಿ. ಕಾಳಮ್ಮ, ರೇಣುಕಾ, ಉಮಾ ಇತರರು ಇದ್ದರು. ಶನಿವಾರ ಮಧ್ಯಾಹ್ನ ಬಹಿರಂಗ ಸಭೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next