Advertisement

Davanagere: ಗಣೇಶ ವಿಸರ್ಜನೆ ವೇಳೆ ಜೆಸಿಬಿ ಹರಿದು ಮಹಿಳೆ ಸೇರಿ 5-6 ಮಂದಿಗೆ ಗಂಭೀರ ಗಾಯ

10:54 PM Sep 15, 2024 | Team Udayavani |

ದಾವಣಗೆರೆ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಹಿಳೆಯೊಬ್ಬರ ಮೇಲೆ ಜೆಸಿಬಿ ಹರಿದು ಗಂಭೀರ ಗಾಯಗೊಂಡರೆ ಇತರ ಐದಾರು ಮಂದಿಗೆ ತೀವ್ರ  ಗಾಯಗಳಾದ ಘಟನೆ ರವಿವಾರ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ನಡೆದಿದೆ.

Advertisement

ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಗ್ರಾಮದ ಯುವಕನೊಬ್ಬ ಜೆಸಿಬಿಯಲ್ಲಿ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಲು ಮುಂದಾಗಿದ್ದ ಜೆಸಿಬಿ ಸರಿಯಾಗಿ ಚಾಲನೆ ಮಾಡಲಾಗದ ಆ ಯುವಕ  ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿದ್ದರಿಂದ ಅದು ಗುಂಪಿನಲ್ಲಿದ್ದವರತ್ತ ತಿರುಗಿದೆ. ಜೆಸಿಬಿ ತಿರುಗಿದ ಭರದಲ್ಲಿ ಗಾಡಿಯ ಚಕ್ರವು ಬಸಮ್ಮ ಎಂಬ ಮಹಿಳೆಯ ಹೊಟ್ಟೆಯ ಮೇಲೆ ಹರಿದಿದೆ.

ಅಲ್ಲದೇ, ಸಮೀಪವಿದ್ದ ಗ್ರಾಮದ ದೇವಸ್ಥಾನದ ಹಳೆಯ ಗೋಡೆಗೆ ಬಡಿದಿದ್ದರಿಂದ ಗೋಡೆ ಬಿದ್ದು 8 ವರ್ಷದ ಸಿರಿ ಎಂಬ ಬಾಲಕಿ ಸೇರಿದಂತೆ ಐದಾರು ಮಂದಿಗೆ ತೀವ್ರ ಗಾಯವಾಗಿದೆ. ಬಳಿಕ ಹರಸಾಹಸ ಮಾಡಿ, ಜೆಸಿಬಿ ನಿಲ್ಲಿಸಿದ್ದಾರೆ. ಚಕ್ರಕ್ಕೆ ಸಿಲುಕಿದ್ದ ಮಹಿಳೆ  ಬಸಮ್ಮನನ್ನು ಗ್ರಾಮಸ್ಥರು  ತಕ್ಷಣವೇ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಮಲೇಬೆನ್ನೂರು ಪೊಲೀಸರಿಗೆ  ಮಾಹಿತಿ ನೀಡಿದ್ದಾರೆ.

ಗಂಭೀರ ಗಾಯಗೊಂಡಿರುವ ಬಸಮ್ಮನಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗಿದೆ. ಗ್ರಾಮದ ಯುವಕರು ತಕ್ಷಣವೇ ಗಣೇಶ ಮೂರ್ತಿ ಒಯ್ದು ವಿಸರ್ಜಿಸಿದ್ದಾರೆ. ಜೆಸಿಬಿ ವಶಕ್ಕೆ ಪಡೆದ ಮಲೇಬೆನ್ನೂರು ಪೊಲೀಸರು ಜೆಸಿಬಿ ಚಾಲನೆ ಮಾಡಿದ ಯುವಕನ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next