Advertisement

ಕಾಂಗ್ರೆಸ್‌ ನಾಯಕರು ಸಣ್ಣತನದ ಹೇಳಿಕೆ ನೀಡೋದು ಬಿಡಲಿ

06:34 PM Aug 22, 2021 | Team Udayavani |

ಚಿತ್ರದುರ್ಗ: ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿ ಸಣ್ಣತನದ ಮಾತನಾಡಬಾರದು. ಕೊರೊನಾ ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವವನ್ನೇ ಆವರಿಸಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾಶೀರ್ವಾದ ಯಾತ್ರೆ ಕುರಿತು ಕಾಂಗ್ರೆಸ್‌ ನಾಯಕರು ಟೀಕೆ ಮಾಡುತ್ತಿದ್ದಾರೆ. ಆದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ಕ್ಷುಲ್ಲಕ ಭಾಷೆ ಬಳಸಲು ಇವರಿಗೆಲ್ಲ ಯಾಕೆ ಮನಸ್ಸು ಬರುತ್ತದೋ ಗೊತ್ತಿಲ್ಲ ಎಂದರು. ಕಾಂಗ್ರೆಸ್‌ ನಾಯಕರ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಏನೂ ಇಲ್ಲ. ಒಂದೂ ಆರೋಪವಿಲ್ಲದೆ ಏಳು ವರ್ಷಗಳ ಆಡಳಿತ ನಡೆದಿದೆ.

ಅದಕ್ಕಾಗಿ ಇಲ್ಲಸಲ್ಲದ್ದನ್ನು ಹೇಳುತ್ತಿದ್ದಾರೆ. ಮಾತನಾಡುವಾಗ ಗಾಂಭೀರ್ಯತೆ ಇರಲಿ. ಜನಾಶೀರ್ವಾದ ಯಾತ್ರೆಯಲ್ಲಿ ಜನ ಭಾವನಾತ್ಮಕವಾಗಿ ಸೇರಿದ್ದಾರೆ. ಕಾಂಗ್ರೆಸ್‌ನವರು ಕೂಡ ಎಲ್ಲಾ ಕಡೆ ಜನರನ್ನು ಸೇರಿಸುತ್ತಿದ್ದಾರೆ. ಕೋವಿಡ್‌ ನಿಯಮ ಪಾಲಿಸುವುದು ನಮ್ಮ ಧರ್ಮ. ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿದಂತೆ ಎಲ್ಲರಿಗೂ ಒಂದೇ ನಿಯಮ ಎಂದು ತಿಳಿಸಿದರು. ಸಚಿವ ಆನಂದ ಸಿಂಗ್‌ ಮುನಿಸಿನ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ಅವರಿಗೆ ಯಾವ ಮುನಿಸೂ ಇಲ್ಲ. ಸಿಎಂ ಜೊತೆ ಚರ್ಚಿಸಿದ್ದಾರೆ.

ಆನಂದ್‌ ಸಿಂಗ್‌ ಚಿನ್ನದಂತವರು. ಎಳೆಯ ಮಗುವಿನ ರೀತಿ. ನಿನ್ನೆಯಿಂದ ಅವರ ಕಚೇರಿ ತೆರೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next