Advertisement

ಬುದ್ದಿ ಮಾತು ಕೇಳದ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ತಂದೆ

08:04 PM Jun 18, 2021 | Team Udayavani |

ಪಿರಿಯಾಪಟ್ಟಣ: ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಮಗಳಿಗೆ ಎಷ್ಟೇ ಬುದ್ದಿ ಹೇಳೀದರೂ ಕೇಳದ ಹಿನ್ನೆಲೆಯಲ್ಲಿ ತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ಮಹದೇಶ್ವರ ದೇವಸ್ಥಾನದ ರಸ್ತೆಯಲ್ಲಿ ನಡೆದಿದೆ.

Advertisement

ಪಟ್ಟಣದ ಗೊಲ್ಲರಬೀದಿಯ ನಿವಾಸಿ ಗಾಯತ್ರಿ (21) ಹತ್ಯೆಯಾದ ಯುವತಿ. ಈಕೆಯ ತಂದೆ ಜಯರಾಮ್ ಕೊಲೆ ಮಾಡಿದ ವ್ಯಕ್ತಿಯಾಗಿದ್ದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಜಯರಾಮ್ ಎಂಬುವವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೊದಲನೆ ಮಗಳನ್ನು ಈಗಾಗಲೇ ಮದುವೆ ಮಾಡಿದ್ದು, ಎರಡೆನೆ ಮಗಳು ಮೈಸೂರಿನ ಕಾಲೇಜು ಒಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮೂರನೆಯವಳಾದ ಗಾಯತ್ರಿ ಪಿಯುಸಿ ವ್ಯಾಸಂಗವನ್ನು ಮಾಡುತ್ತಿದ್ದಾಗ ತಾಯಿ ಅನಾರೋಗ್ಯಕ್ಕೆ ಬಿದ್ದ ನಂತರ ತನ್ನ ವಿದ್ಯಾಭ್ಯಾಸವನ್ನು ಅರ್ಧದಲ್ಲೀಯೇ ನಿಲ್ಲಿಸಿ ಮನೆಯಲ್ಲಿಯೇ ತಂದೆತಾಯಿಗಳೊಂದಿಗೆ ವಾಸವಾಗಿದ್ದಳು. ಇದರ ನಡುವೆ ಗಾಯತ್ರಿ ಒಂದುವರೆ ವರ್ಷದಿಂದ ಅನ್ಯ ಕೋಮಿನ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು ಈ ವಿಚಾರವಾಗಿ ತಂದೆ ಮಗಳಿಗೆ ಅನೇಕ ಬಾರಿ ಮನವೋಲಿಸಿ ಬುದ್ದಿ ಹಠ ಹಿಡಿದಿದ್ದಳು.

ಮನೆಯವರು ಮಾನ ಹೋಗುತ್ತದೆ ಬೇಡ ಎಂದರೂ ಕೇಳದೇ ಆತನನ್ನು ಮದುವೆಯಾಗುತ್ತೇನೆ ಎನ್ನುತ್ತಿದ್ದ ಮಗಳ ಹಠಮಾರಿ ದೋರಣೆಯಿಂದ ಕುಪಿತಗೊಂಡ ತಂದೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಊಟ ಕೊಡಲು ಬಂದ ಮಗಳನ್ನು ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿ ತಾನೇ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.

ವಿಷಯ ತಿಳಿದ ಬಳಿಕ ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್, ವೃತ್ತ ನಿರೀಕ್ಷಕರಾದ ಜಗದೀಶ್, ಬಿ.ಆರ್.ಪ್ರದೀಪ್,  ಪಿಎಸ್ಐಗಳಾದ ಸದಾಶಿವ ತಿಪ್ಪಾರೆಡ್ಡಿ,  ಪುಟ್ಟರಾಜ ಮತ್ತು ಸಿಬ್ಬಂದಿಗಳಾದ ವೀರೇಂದ್ರಕುಮಾರ್, ನಾರಾಯಣ ಶೆಟ್ಟಿ ಬೆರಳು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next