Advertisement

ದರ್ಶನ್‌ ಭರ್ಜರಿ ನಿರೂಪಣೆ

10:25 AM Aug 06, 2017 | Team Udayavani |

“ತಾರಕ್‌’ ಮುಗಿಸಿರುವ ದರ್ಶನ್‌ ಈಗ “ಮುನಿರತ್ನ ಕುರುಕ್ಷೇತ್ರ’ ಮೂಡ್‌ನ‌ಲ್ಲಿದ್ದಾರೆ. ಇಂದು ದರ್ಶನ್‌ ಅವರ 50ನೇ ಚಿತ್ರ “ಮುನಿರತ್ನ ಕುರುಕ್ಷೇತ್ರ’ ಸೆಟ್ಟೇರುತ್ತಿದೆ. ಈ ಗ್ಯಾಪಲ್ಲೇ ದರ್ಶನ್‌ ಸಿನಿಮಾವೊಂದಕ್ಕೆ ಧ್ವನಿ ನೀಡಿದ್ದಾರೆ. ಅದು “ಭರ್ಜರಿ’. ಧ್ರುವ ಸರ್ಜಾ ನಾಯಕರಾಗಿರುವ “ಭರ್ಜರಿ’ ಚಿತ್ರಕ್ಕೆ ದರ್ಶನ್‌ ಶನಿವಾರ ಧ್ವನಿ ನೀಡಿದ್ದು, ಚಿತ್ರತಂಡ ಖುಷಿಯಾಗಿದೆ.

Advertisement

ದರ್ಶನ್‌ ಅವರ ನಿರೂಪಣೆಯೊಂದಿಗೆ “ಭರ್ಜರಿ’ ಚಿತ್ರ ಆರಂಭವಾಗಲಿದೆ. 12 ನಿಮಿಷಗಳ ಕಾಲ ದರ್ಶನ್‌ ಧ್ವನಿ ನೀಡಿದ್ದು, ಇದು ಆರಂಭದಿಂದ ಸಿನಿಮಾ ಮುಗಿಯುವವರೆಗೆ ಅಲ್ಲಲ್ಲಿ ಬಂದು ಹೋಗಲಿದೆ.  ಚೇತನ್‌ ಕುಮಾರ್‌ ಈ ಚಿತ್ರದ ನಿರ್ದೇಶಕರಾಗಿದ್ದು, ಚಿತ್ರ ಈ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗಲಿದೆ. ದರ್ಶನ್‌ ಅವರಿಂದ ಧ್ವನಿ ಕೊಡಿಸಲು ಮತ್ತೂಂದು ಕಾರಣವಿದೆ.

ಚಿತ್ರ “ಲೈಫ್ ಅಂಡ್‌ ಚಾಲೆಂಜ್‌’ ಎಂಬ ಕಾನ್ಸೆಪ್ಟ್ನಡಿ ಸಾಗಲಿದ್ದು, ಇಂತಹ ಸಿನಿಮಾಕ್ಕೆ “ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಧ್ವನಿ ಕೊಟ್ಟರೆ ಚೆಂದ ಎಂದು ಚಿತ್ರತಂಡ ನಿರ್ಧರಿಸಿತಂತೆ. ಅದರಂತೆ ದರ್ಶನ್‌ ಅವರನ್ನು ಕೇಳಿದಾಗ ಅವರು ಕೂಡಾ ಖುಷಿಯಿಂದ ಒಪ್ಪಿಕೊಂಡು, ಧ್ವನಿ ನೀಡಿದ್ದಾರೆ ಎಂಬುದು ಚಿತ್ರತಂಡದ ಮಾತು. “ದರ್ಶನ್‌ ಅವರು ನಮ್ಮ ಸಿನಿಮಾಕ್ಕೆ ಧ್ವನಿ ನೀಡಿದ್ದು ಖುಷಿಕೊಟ್ಟಿದೆ. ಚಿತ್ರದಲ್ಲಿ 12 ನಿಮಿಷ ಅವರ ಧ್ವನಿ ಬರಲಿದೆ.

ಆರಂಭ, ಇಂಟರ್‌ವಲ್‌ ಹಾಗೂ ಸಿನಿಮಾ ಕೊನೆಯಲ್ಲಿ ಅವರ ಧ್ವನಿ ಬರಲಿದೆ. ಬದುಕು ಹಾಗೂ ಸವಾಲಿನ ಸುತ್ತ ಸಾಗುವ ಈ ಸಿನಿಮಾಕ್ಕೆ ಈಗ ಚಾಲೆಂಜಿಂಗ್‌ ಸ್ಟಾರ್‌ ಧ್ವನಿ ನೀಡಿರೋದು ಖುಷಿಯ ವಿಚಾರ’ ಎನ್ನುವುದು ನಿರ್ದೇಶಕ ಚೇತನ್‌ ಮಾತು.  ಅಂದಹಾಗೆ, ಚೇತನ್‌ ಅವರ “ಬಹದ್ದೂರ್‌’ ಸಿನಿಮಾಕ್ಕೆ ಪುನೀತ್‌ ಧ್ವನಿ ನೀಡಿದ್ದರು. ಈಗ “ಭರ್ಜರಿ’ಗೆ ದರ್ಶನ್‌ ಸಾಥ್‌ ನೀಡಿದ್ದಾರೆ. ದರ್ಶನ್‌ ಈ ಹಿಂದೆ ಎಂ.ಡಿ.ಶ್ರೀಧರ್‌ ನಿರ್ದೇಶನದ “ಬುಗುರಿ’ಗೂ ಕಾಮೆಂಟರಿ ಕೊಟ್ಟಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next