Advertisement

Renukaswamy Case: ದರ್ಶನ್‌ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!

09:08 PM Jun 13, 2024 | Team Udayavani |

ಮೈಸೂರು: ನಟ ದರ್ಶನ್‌ ಅವರೊಂದಿಗೆ ಬಂಧಿತನಾಗಿರುವ ನಾಗರಾಜು ಅಲಿಯಾಸ್‌ ನಾಗ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

Advertisement

ಮೈಸೂರು ನಗರದ ತೊಣಚಿಕೊಪ್ಪಲು ಬಡಾವಣೆ (ಟಿ.ಕೆ.ಲೇಔಟ್‌ )ನ ನಿವಾಸಿಯಾಗಿರುವ ನಾಗರಾಜು 15 ವರ್ಷ ಗಳ ಹಿಂದೆ ನಗರದ ಪೆಟ್ರೋಲ್‌ ಬಂಕ್‌ವೊಂದ ರಲ್ಲಿ ಕೆಲಸ ಮಾಡಿಕೊಂಡಿದ್ದ. ದರ್ಶನ್‌ ಸ್ನೇಹಿತರ ಮೂಲಕ ದರ್ಶನ್‌ ಆಪ್ತ ವಲಯಕ್ಕೆ ಸೇರಿಕೊಂಡು ಅವರ ಎಲ್ಲ ಕಾರ್ಯ ಚಟುವಟಿಕೆಯನ್ನು ನೋಡಿಕೊಳ್ಳುತ್ತಿದ್ದ ಎಂಬ ಮಾಹಿ ತಿ ಗೊತ್ತಾಗಿದೆ.

ಈತ ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್‌ ನಂ. 21ರಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದ. ಅಲ್ಲದೆ, ಕಾಂಗ್ರೆಸ್‌ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ದರ್ಶನ್‌ ಮೂಲಕ ಪಾಲಿಕೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವ ಪ್ಲ್ರಾನ್‌ ಮಾಡಿದ್ದ. ಜತೆಗೆ ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿದ್ದ. 15 ವರ್ಷಗಳಿಂದ ದರ್ಶನ್‌ ಜತೆಯಲ್ಲೇ ಇರುವ ನಾಗರಾಜ್‌, ದರ್ಶನ್‌ ತೋಟದ ಮನೆಯ ನಿರ್ವಹಣೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next