Advertisement

ಧರ್ಮಸ್ಥಳಕ್ಕೆ ನಟ ದರ್ಶನ್‌ ಭೇಟಿ, ದರ್ಶನ

11:01 AM Jun 29, 2019 | keerthan |

ಬೆಳ್ತಂಗಡಿ: ನಟ ದರ್ಶನ್‌ ತೂಗುದೀಪ್‌ ಶುಕ್ರವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Advertisement

ಬಳಿಕ ಧರ್ಮಸ್ಥಳದ ಡಾ| ಡಿ. ಹರ್ಷೆದ್ರ ಕುಮಾರ್‌ ಅವರನ್ನು ಭೇಟಿ ಮಾಡಿದರು. ಕ್ಷೇತ್ರದ ಪರವಾಗಿ ದೇಗುಲದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್‌ ಸ್ವಾಗತಿಸಿದರು. ಧರ್ಮಸ್ಥಳದ ಗ್ರಾಮ ಪಂಚಾಯತ್‌ ಅಧ್ಯಕ್ಷ ಚಂದನ್‌ ಪ್ರಸಾದ್‌ ಕಾಮತ್‌ ಇದ್ದರು.

ಧರ್ಮಸ್ಥಳ ಭೇಟಿಯ ಬಳಿಕ ನಟ ದರ್ಶನ್‌ ಬಳಿಕ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ತೆರಳಿದರು.
ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆದರು. ಅಭಿಮಾನಿಗಳ ನೂಕುನುಗ್ಗಲನ್ನು ತಪ್ಪಿಸುವುದಕ್ಕಾಗಿ ಅವರ ಭೇಟಿಯನ್ನು ಗುಪ್ತವಾಗಿರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next