Advertisement

ಪಿ.ಸಿ.ಮೋಹನ್‌ ಪರ ದರ್ಶನ್‌ ಪ್ರಚಾರ

09:24 AM Apr 09, 2019 | Lakshmi GovindaRaju |

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಪಿ,ಸಿ.ಮೋಹನ್‌ ಪರ ನಟ ದರ್ಶನ ಮತಯಾಚಿಸಿದರು.

Advertisement

ಸೋಮವಾರ ಬೆಳಗ್ಗೆ 9 ಗಂಟೆಗೆ ಸಿ.ವಿ.ರಾಮನ್‌ ನಗರದಿಂದ ಆರಂಭವಾದ ರ್ಯಾಲಿಯಲ್ಲಿ ನಟ ದರ್ಶನ್‌, ಬಿಜೆಪಿ ಸ್ಟಾರ್‌ ಪ್ರಚಾರಕಿ ತಾರಾ ಅನುರಾಧ, ಅಭ್ಯರ್ಥಿ ಪಿ.ಸಿ.ಮೋಹನ್‌ ಭಾಗವಹಿಸಿದ್ದರು. ಈ ರ್ಯಾಲಿಗೆ ಸಿ.ವಿ.ರಾಮನ್‌ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಸದಸ್ಯರು, ಕಾರ್ಯಕರ್ತರ ಸಾಥ್‌ ನೀಡಿದರು.

ಈ ವೇಳೆ ಮಾತನಾಡಿದ ನಟ ದರ್ಶನ್‌, “ನಾನು ಯಾವುದೇ ಪಕ್ಷ ನೋಡಿ ಪ್ರಚಾರ ಮಾಡಲು ಹೋಗುವುದಿಲ್ಲ. ನನಗೆ ವ್ಯಕ್ತಿ ಮುಖ್ಯವಾಗಿದ್ದು, ಅವರ ಪರ ಮತಯಾಚಿಸುತ್ತಿದ್ದೇನೆ. ಪ್ರಚಾರಕ್ಕಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ, ಬದಲಾಗಿ ಮುಂದೆ ಗೆದ್ದಿರುವ ಜನಪ್ರತಿನಿಧಿಗಳಿಂದ ಬಡವ ರೋಗಿಗಳಿಗೆ ಸಹಾಯ ಮಾಡಬಹುದು, ಆ ರೋಗಿಗಳ ಚಿಕಿತ್ಸೆಗೆ ಶಿಫಾರಸ್ಸು ಪತ್ರ ಸಿಗಬಹುದು ಎಂಬ ಉದ್ದೇಶ ಮಾತ್ರ ಇದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next