Advertisement

ನಟ ದರ್ಶನ್‌ ಜನ್ಮದಿನ ಆಚರಣೆ

06:37 PM Feb 17, 2021 | Team Udayavani |

ಚಿತ್ರದುರ್ಗ: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಅಖೀಲ ಕರ್ನಾಟಕ ದರ್ಶನ್‌ ತೂಗುದೀಪ ಸೇನೆಯಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ಮತ್ತು ಪೆನ್‌ಗಳನ್ನು ವಿತರಣೆ ಮಾಡಲಾಯಿತು.

Advertisement

ಕೋವಿಡ್‌ ಹಿನ್ನೆಲೆಯಲ್ಲಿ ದರ್ಶನ್‌ ಅಭಿಮಾನಿಗಳ ಸಂಘದಿಂದ ನಗರದ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಸರಳವಾಗಿ ಜನ್ಮದಿನ ಆಚರಿಸಲಾಯಿತು. “ಡಿ ಬಾಸ್‌’ ಎಂಬ ಅಕ್ಷರದ ವಿಶೇಷ ಕೇಕ್‌ ತಂದು ವಿದ್ಯಾರ್ಥಿಗಳಿಂದ ಕತ್ತರಿಸಿ ಸಂಭ್ರಮಿಸಲಾಯಿತು. ಇದೇ ವೇಳೆ ಬಡ ಮಕ್ಕಳಿಗೆ ನೋಟ್‌ಬುಕ್‌, ಪೆನ್ನುಗಳನ್ನು ವಿತರಿಸಲಾಯಿತು.

ಮೆದೇಹಳ್ಳಿ ಗ್ರಾಪಂ  ಮಾಜಿ ಅಧ್ಯಕ್ಷ ವಿಜಯಕುಮಾರ್‌, ಸಮಾಜಸೇವಕರಾದ ಗೋಪಿಕೃಷ್ಣ, ರೈತ ಮುಖಂಡ ಲಿಂಗಾವರಹಟ್ಟಿ ಲಕ್ಷ್ಮೀಕಾಂತ್‌, ಎಸ್‌.ಬಿ. ಲೋಕೇಶ್‌ ಸಜ್ಜನಕೆರೆ, ನಿಂಗಲ ಪಾಪಣ್ಣ, ಎಚ್‌. ಮಂಜುನಾಥ್‌, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಖೀಲ ಕರ್ನಾಟಕ ದರ್ಶನ್‌ ತೂಗುದೀಪ ಸೇನೆಯ ಜಿಲ್ಲಾಧ್ಯಕ್ಷ ರಘು ದರ್ಶನ್‌, ಪ್ರಧಾನ ಕಾರ್ಯದರ್ಶಿ ಕೇಶವ, ಆಟೋ ಘಟಕದ ಅಧ್ಯಕ್ಷ ಜಗ್ಗು ಮತ್ತಿತರರು ಈ ಕಾರ್ಯಕ್ರಮ ಸಂಘಟಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next