Advertisement

ನಿಷೇಧ ತೆರವಿಗೆ ಮನವಿ ಸಲ್ಲಿಸಿದ ದಾನಿಶ್‌ ಕನೇರಿಯ

02:45 AM Jun 16, 2020 | Sriram |

ಕರಾಚಿ: ತನ್ನ ಮೇಲೆ ಹೇರಲಾಗಿ ರುವ ಆಜೀವ ಕ್ರಿಕೆಟ್‌ ನಿಷೇಧವನ್ನು ತೆರವು ಗೊಳಿಸಿ ದೇಶಿ ಕ್ರಿಕೆಟ್‌ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ನೀಡಬೇಕೆಂದು ಪಾಕಿಸ್ಥಾನದ ಸ್ಪಿನ್ನರ್‌ ದಾನಿಶ್‌ ಕನೇರಿಯ ಪಿಸಿಬಿಗೆ ಮನವಿ ಸಲ್ಲಿಸಿದ್ದಾರೆ.

Advertisement

“ನನಗೆ ದೇಶಿ ಕ್ರಿಕೆಟ್‌ ಕೂಟಗಳಲ್ಲಿ ಆಡಬೇಕೆಂಬ ಆಸೆ ಇದೆ. ನನ್ನ ಮೇಲಿನ ನಿಷೇಧ ವನ್ನು ಹಿಂದಕ್ಕೆ ಪಡೆದು, ಇದಕ್ಕೆ ಅವಕಾಶ ಮಾಡಿ ಕೊಡಬೇಕು’ ಎಂದು ಪಿಸಿಬಿ ಅಧ್ಯಕ್ಷ ಎಹಸಾನ್‌ ಮಣಿ ಅವರಿಗೆ ಕನೇರಿಯ ಪತ್ರ ಬರೆದಿದ್ದಾರೆ.

2012ರ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ಪಂದ್ಯಾವಳಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ನಡೆಸಿದ್ದು ಸಾಬೀತಾದ ಕಾರಣ ದಾನಿಶ್‌ ಕನೇರಿಯ ಅವರಿಗೆ ಪಿಸಿಬಿ ಆಜೀವ ಕ್ರಿಕೆಟ್‌ ನಿಷೇಧ ವಿಧಿಸಿತ್ತು.

ಪಾಕಿಸ್ಥಾನವನ್ನು ಪ್ರತಿನಿಧಿಸಿದ ಕೇವಲ ಎರಡನೇ ಹಿಂದೂ ಕ್ರಿಕೆಟಿಗನಾಗಿರುವ ದಾನಿಶ್‌ ಕನೇರಿಯ, 61 ಟೆಸ್ಟ್‌ಗಳಿಂದ 261 ವಿಕೆಟ್‌ ಉರುಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next