Advertisement

ಸುದಿನ ಫಲಶ್ರುತಿ : ಪರಣೆ: ಅಪಾಯಕಾರಿ ಮರ ತೆರವು

02:45 AM Jul 05, 2018 | Team Udayavani |

ಸವಣೂರು : ಸವಣೂರು-ಬೆಳ್ಳಾರೆ ರಸ್ತೆಯ ಪರಣೆ-ಬಂಬಿಲ ನಡುವೆ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವನ್ನು ಕೊನೆಗೂ ಅರಣ್ಯ ಇಲಾಖೆ ತೆರವುಗೊಳಿಸಿದೆ. ಈ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ಹಲವು ಬಾರಿ ಸಾರ್ವಜನಿಕರು ಮನವಿ ಮಾಡುತ್ತಲೇ ಇದ್ದರು. ಕೆಲದಿನಗಳ ಹಿಂದೆ ಈ ರಸ್ತೆಯ ಚರಂಡಿ ದುರಸ್ತಿ ವೇಳೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಅವರಲ್ಲಿ ಸವಣೂರು ಗ್ರಾ.ಪಂ.ಸದಸ್ಯ ಸತೀಶ್‌ ಅಂಗಡಿಮೂಲೆ ಅವರು ಅಪಾಯಕಾರಿ ಮರ ತೆರವುಗೊಳಿಸುವಂತೆ ವಿನಂತಿಸಿದ್ದರು. 

Advertisement

ಮರ ತೆರವು ಕುರಿತಂತೆ ಆರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ‘ಸುದಿನ’ ವರದಿ ಪ್ರಕಟಿಸಿ ಅಪಾಯಕಾರಿ ಮರದ ಕುರಿತಾಗಿ ಇಲಾಖೆಯ ಗಮನ ಸೆಳೆದಿತ್ತು.ಅದರಂತೆ ಮಂಗಳವಾರ ಅರಣ್ಯ ಇಲಾಖೆಯ ಮೂಲಕ ಮರ ತೆರವುಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next