Advertisement

Dandeli: ನಿಗದಿತ ಸಮಯಕ್ಕೆ ಹೊರಡದ ದಾಂಡೇಲಿ -ಯಲ್ಲಾಪುರ ಸಾರಿಗೆ ಬಸ್: ಪ್ರಯಾಣಿಕರು ಆಕ್ರೋಶ

01:16 PM Dec 22, 2023 | Team Udayavani |

ದಾಂಡೇಲಿ: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 8.45 ನಿಮಿಷಕ್ಕೆ ಹೊರಡಬೇಕಾದ ದಾಂಡೇಲಿ-ಯಲ್ಲಾಪುರ- ಶಿರಸಿ ಬಸ್ ಶುಕ್ರವಾರ ನಿಗದಿತ ಸಮಯಕ್ಕೆ ಹೊರಡದೇ ಸುಮಾರು 1.15 ನಿಮಿಷದ ನಂತರ ಹೊರಡಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಪ್ರಯಾಣಿಕರು ಸಾರಿಗೆ ಘಟಕದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಎಂದಿನಂತೆ ಬೆಳಿಗ್ಗೆ 8.45 ನಿಮಿಷಕ್ಕೆ ಹೊರಡಬೇಕಾದ ಬಸ್, ದುರಸ್ತಿ ಹಿನ್ನೆಲೆ ಮತ್ತೆ ಸಾರಿಗೆ ಡಿಪೋಗೆ ಹೋಗಿ ದುರಸ್ತಿ ಮಾಡಿಸಿಕೊಂಡು 10 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದಿದೆ. ಆನಂತರ ಪ್ರಯಾಣಿಕರು ಸಾರಿಗೆ ಘಟಕದ ನಿರ್ಲಕ್ಷ್ಯಕ್ಕೆ ಹಿಡಿ ಶಾಪ ಹಾಕಿ ಬಸ್ ಹತ್ತಿದ್ದಾರೆ.

ಸಾರಿಗೆ ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಸ್ ಬರುವ ಮುನ್ನವೇ ಬಸ್ ಅನ್ನು ಸರಿಪಡಿಸಿ ನಿಲ್ದಾಣಕ್ಕೆ ಬರಬೇಕೆ ವಿನಹ: ಬಸ್ ನಿಲ್ದಾಣಕ್ಕೆ ಬಂದ ನಂತರ ಮತ್ತೆ ದುರಸ್ತಿಗೆ ತೆಗೆದುಕೊಂಡು ಹೋಗುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.

ಕೆಟ್ಟು ಹೋದ ಬಸ್ಸನ್ನು ದುರಸ್ತಿ ಮಾಡಿ ಅದನ್ನೇ ಕಳುಹಿಸುವ ಬದಲು, ನಿಗದಿತ ಸಮಯಕ್ಕೆ ಬದಲಿ ಬಸ್ಸನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಇನ್ನು ಮುಂದೆಯಾದರೂ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next