Advertisement

Dandeli: ಜೈನಮುನಿಗಳಿಗೆ ಸೂಕ್ತ ರಕ್ಷಣೆ ಕೊಡುವಂತೆ ಆಗ್ರಹಿಸಿ ಜೈನ ಸಮಾಜದಿಂದ ಸಿ.ಎಂ.ಗೆ ಮನವಿ

02:57 PM Jul 18, 2023 | Team Udayavani |

ದಾಂಡೇಲಿ: ಜೈನಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮತ್ತು ಜೈನ ಮುನಿ ಮಹಾರಾಜರುಗಳಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜು.18ರ ಮಂಗಳವಾರ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸಂದೇಶ್ ಎಸ್.ಜೈನ್ ಮಾತನಾಡಿ, ಆಚಾರ್ಯಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿಬೇಕು. ಜೈನಮುನಿಗಳಿಗೆ ಸೂಕ್ತ ರೀತಿ ರಕ್ಷಣೆ ಕೊಡುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು. ಹತ್ಯೆ ಮಾಡಿದ ಆರೋಪಿಗಳನ್ನು ತ್ವರಿತಗತಿಯಲ್ಲಿ ಬಂಧಿಸಿದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಹಾವೀರ ನೇರ್ಲೆಕರ್, ಪ್ರಮುಖರುಗಳಾದ ಶ್ರೀಕಾಂತ್ ದೇವಕಿ, ಎಸ್.ಕೆ.ಬನ್ಸಾಲಿ, ಮಹಾವೀರ ಬಂಡಿ, ಅಭಯ್ ಎಸ್. ಸದಲಗಿ, ಶಾಂತಿನಾಥ್ ಟೋಪಣ್ಣನವರ್, ಅನಂತ್ ಪಿ.ಕುಡಚಿ, ಉಜ್ವಲ ಉದಯ್ ಶಾ,  ರುದ್ರಪ್ಪ, ಸುರೇಶ್ ಆರ್.ಜಿ, ಸಂತೋಷ್ ಜೈನ್, ಭೂಪೇಂದ್ರ ಜೈನ್, ಸೋನಲ್ ಎಸ್.ಜೈನ್, ಪ್ರಶಾಂತ್, ವಿಜಯ್, ಭಾರತಿ ಕುಡಚಿ, ಉದಯ ಮಂಗಲದಾಸ್ ಶಾ, ಜಯಶ್ರೀ, ವಿಜಯಲಕ್ಷ್ಮೀ, ನಾಗರತ್ನಾ, ನಿಶಾ ಜೈನ್, ರವಿ ಜೈನ್, ಆದಿತ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next