Advertisement

Crime: ನಾಪತ್ತೆಯಾಗಿದ್ದ 6 ವರ್ಷದ ಬಾಲಕನ ಮೃತದೇಹ ಪಕ್ಕದ ಮನೆಯ ನೀರಿನ ಟ್ಯಾಂಕಿನಲ್ಲಿ ಪತ್ತೆ

11:22 AM Sep 15, 2023 | Team Udayavani |

ದಾಂಡೇಲಿ : ನಗರದ ಗಾಂಧಿನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಮನೆಯ ಮೇಲ್ಗಡೆಯಲ್ಲಿರುವ ನೀರಿನ ಟ್ಯಾಂಕಿನಲ್ಲಿ ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ಪತ್ತೆಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.

Advertisement

ಗಾಂಧಿನಗರದ ಕಂಜಾರಬಾಟ್ ನಿವಾಸಿ ಸುನೀಲ್ ಕಂಜಾರಬಾಟ್ ಎಂಬವರ 6 ವರ್ಷ ವಯಸ್ಸಿನ ಮಗನಾದ ಯಶ್ ಸುನೀಲ್ ಕಂಜಾರಬಾಟ್ ಎಂಬವನೇ ಮೃತಪಟ್ಟ ಪುಟಾಣಿ ಬಾಲಕನಾಗಿದ್ದಾನೆ. ಗುರುವಾರ ಸಂಜೆ ಡಿಜೆ ಸೌಂಡ್ ಬರುತ್ತಿರುವುದನ್ನು ನೋಡಲೆಂದು ಹೋದವನು ನಾಪತ್ತೆಯಾಗಿದ್ದನು. ಎಷ್ಟೇ ಹುಡುಕಾಡಿದರೂ ಸಿಗದಿದ್ದಾಗ, ಸ್ಥಳೀಯ ನಗರ ಸಭಾ ಸದಸ್ಯೆ ರುಕ್ಮಿಣಿ ಬಾಗಾಡೆಯವರು ಅಲ್ಲೆ ಹತ್ತಿರದಲ್ಲಿ ನಿರ್ಮಾಣದ ಹಂತದಲ್ಲಿರುವ ಮನೆಯ ಮಾಲಕರಾದ ರಾಜು ಕಾಂಬಳೆಯವರನ್ನು ಸ್ಥಳಕ್ಕೆ ಕರೆಸಿ ಮನೆಯ ಮೇಲ್ಗಡೆಯಿರುವ ನೀರಿನ ಟ್ಯಾಂಕನ್ನು ಪರಿಶೀಲನೆ ಮಾಡಲಾಯ್ತು. ನೀರಿನ ಟ್ಯಾಂಕಿನ ಮೇಲ್ಗಡೆ ಪ್ಲೈವುಡ್ ಮುಚ್ಚಿದ್ದು ಅದನ್ನು ತೆಗೆದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.

ಬಾಲಕನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು, ಪೊಲೀಸರಿಂದ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದು, ತನಿಖೆಯಿಂದ ನಿಜಾಂಶ ಬೆಳಕಿಗೆ ಬರಬೇಕಾಗಿದೆ.

ಬಾಲಕ ಆಕಸ್ಮಿಕವಾಗಿ ನೀರಿನ ಟ್ಯಾಂಕಿಗೆ ಬಿದ್ದಿದ್ದರೂ ನೀರಿನ ಟ್ಯಾಂಕಿಗೆ ಮುಚ್ಚಿದ್ದ ಪ್ಲೈವುಡ್ ಶೀಟ್ ಮುಚ್ಚಿಯೆ ಇರುವುದರಿಂದ ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡತೊಡಗಿದ್ದು, ಸ್ಥಳೀಯವಾಗಿ ಇದೀಗ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Asia Cup ಸೋಲಿನ ಬೆನ್ನಲ್ಲೇ ಪಾಕ್ ಗೆ ಮತ್ತೊಂದು ಆಘಾತ; ಪ್ರಮುಖ ವೇಗಿ ವಿಶ್ವಕಪ್ ಗೆ ಅನುಮಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next