Advertisement

Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

12:12 PM Sep 16, 2024 | Team Udayavani |

ದಾಂಡೇಲಿ: ನಗರದ ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಎರಡು ಮೂರು ಕಡೆ ಕಚ್ಚಿರುವ ಘಟನೆ ಭಾನುವಾರ (ಸೆ.16) ರಾತ್ರಿ ನಡೆದಿದೆ.

Advertisement

ಮಾರುತಿ ನಗರದ ನಿವಾಸಿ ವಿದ್ಯಾದರ ಕಾಂಬಳೆಯವರ ಪುತ್ರ ಸುಪ್ರೀತ್ ವಿದ್ಯಾಧರ ಕಾಂಬಳೆ ಎಂಬಾತನೆ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕನಾಗಿದ್ದಾನೆ. ಈತ ಮನೆಯಿಂದ ಅಂಗಡಿಗೆ ಹೋಗಿ ಬರುತ್ತಿರುವಾಗ ಏಕ ಏಕಿ ಬೀದಿನಾಯಿಗಳು ದಾಳಿ ಮಾಡಿವೆ. ದಾಳಿಯ ಸಂದರ್ಭದಲ್ಲಿ ಸುಪ್ರೀತ್ ಈತನ ಕಾಲಿಗೆ ಎರಡು ಮೂರು ಕಡೆ ಕಚ್ಚಿವೆ. ತಕ್ಷಣವೇ ಸ್ಥಳೀಯರು ಬೀದಿನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

ಗಾಯಗೊಂಡ ಬಾಲಕ ಸುಪ್ರೀತ್ ಈತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next