Advertisement

Bengaluru: ನಗರದಲ್ಲಿ 10 ಬೀದಿ ನಾಯಿಗಳ ದಾಳಿ; ನಿವೃತ್ತ ಶಿಕ್ಷಕಿ ದುರ್ಮರಣ

12:00 PM Aug 29, 2024 | Team Udayavani |

ಬೆಂಗಳೂರು: ವಾಯುವಿಹಾರ ಮಾಡುತ್ತಿದ್ದ ವೃದ್ಧೆಯೊಬ್ಬರ ಮೇಲೆ ಹತ್ತಾರು ಬೀದಿ ನಾಯಿಗಳು ದಾಳಿ ನಡೆಸಿ ಕೊಂದಿರುವ ದಾರುಣ ಘಟನೆ ಜಾಲಹಳ್ಳಿಯ ಏರ್‌ಫೋರ್ಸ್‌ ಕ್ಯಾಂಪಸ್‌ನಲ್ಲಿ ಬುಧವಾರ ಮುಂಜಾನೆ ನಡೆದಿದೆ.

Advertisement

ಉತ್ತರ ಭಾರತ ಮೂಲದ ರಾಜದುಲ್ಲಾರಿ ಸಿನ್ಹಾ(76) ಮೃತ ಮಹಿಳೆ.

ಜಾಲಹಳ್ಳಿಯ ಏರ್‌ ಫೋರ್ಸ್‌ ಕ್ಯಾಂಪಸ್‌ನಲ್ಲಿರುವ ಅಧಿ ಕಾರಿ ಅಮಿತ್‌ಕುಮಾರ್‌ ಸಿಂಗ್‌ ಅವರ ಅತ್ತೆ ಯಾಗಿರುವ ರಾಜದುಲ್ಲಾರಿ ಸಿನ್ಹಾ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಬುಧವಾರ ಮುಂಜಾನೆ 6.20ರ ಸುಮಾರಿಗೆ ಮನೆ ಸಮೀಪ ದಲ್ಲಿ ವಾಯುವಿಹಾರ ಮಾಡು ತ್ತಿ ದ್ದರು. ಆಗ ಏಕಾಏಕಿ 10-12 ಬೀದಿ ನಾಯಿ ಗಳು ವೃದ್ಧೆ ಮೇಲೆ ದಾಳಿ ನಡೆಸಿದ್ದು, ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಕಚ್ಚಿವೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ರಸ್ತೆ ಯಲ್ಲಿ ಬಿದ್ದಿದ್ದರು. ಅದೇ ವೇಳೆ ನಡೆದು ಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳೀಯರ ನೆರವು ಪಡೆದು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ತೀವ್ರ ರಕ್ತಸ್ರಾವದಿಂದ ವೃದ್ಧೆ ಮೃತಪಟ್ಟಿದ್ದಾರೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next